ಕರ್ನಾಟಕ

karnataka

By

Published : May 26, 2020, 1:09 PM IST

ETV Bharat / bharat

ಪ್ರಿಯತಮೆಯ ಭೇಟಿಗೆ ವಿರೋಧ... ಲವರ್​ ಪೋಷಕರನ್ನೇ ಕೊಂದ ಯುವಕ!

ಪ್ರಿಯತಮೆಯನ್ನು ಭೇಟಿಯಾಗಲು ವಿರೋಧವೊಡ್ಡಿದಕ್ಕೆ ಆಕೆಯ ಪೋಷಕರನ್ನೇ ಯುವಕನೊಬ್ಬ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಸುಲ್ತಾನ್​ಪುರ​ ಜಿಲ್ಲೆಯಲ್ಲಿ ನಡೆದಿದೆ.

boyfriend kills girlfriend's parents in sultanpur
ಪ್ರಿಯತಮೆಯ ಹೆತ್ತವರನ್ನು ಹತ್ಯೆ ಮಾಡಿದ ಯುವಕ

ಸುಲ್ತಾನ್​ಪುರ (ಉತ್ತರ ಪ್ರದೇಶ): ಯುವಕನೊಬ್ಬ ತನ್ನ ಪ್ರಿಯತಮೆಯ ತಂದೆ-ತಾಯಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಘಟನೆ ನಡೆದಿದೆ.

ಸುಲ್ತಾನ್​ಪುರ ಜಿಲ್ಲೆಯ ಗೋಸೈಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಲಾಪುರ್​ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯುವತಿಯನ್ನು ಭೇಟಿಯಾಗಲು ಆಕೆಯ ಹೆತ್ತವರು ವಿರೋಧ ವ್ಯಕ್ತಪಡಿಸಿದ್ದೇ ಹತ್ಯೆಗೆ ಕಾರಣವೆಂದು ಹೇಳಲಾಗ್ತಿದೆ.

ಘಟನೆಯ ಮಾಹಿತಿ ತಿಳಿದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶಿವಹರಿ ಮೀನಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯದ ಬಳಿಕ ಆರೋಪಿ ಯುವಕ ಪರಾರಿಯಾಗಿದ್ದಾನೆ.

ABOUT THE AUTHOR

...view details