ಕರ್ನಾಟಕ

karnataka

By

Published : Apr 11, 2019, 10:18 AM IST

ETV Bharat / bharat

ಮತ ಕೇಂದ್ರದ ಬಳಿ ಬಾಂಬ್​ ಸ್ಫೋಟ: ಯೋಧನಿಗೆ ಗಾಯ

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಮಹಾರಾಷ್ಟ್ರದ ಗಡ್ಚಿರೋಲಿ ಮತದಾನ ಕೇಂದ್ರದ ಬಳಿ ಬಾಂಬ್​ ಸ್ಫೋಟಗೊಂಡಿದೆ.

ಮತಕ್ಷೇತ್ರ

ಗಡ್ಚಿರೋಲಿ: ಮಹಾರಾಷ್ಟ್ರದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಇದರ ಮಧ್ಯೆ ಗಡ್ಚಿರೋಲಿಯ ಮತದಾನ ಕೇಂದ್ರದ ಬಳಿ ಬಾಂಬ್​ ಸ್ಫೋಟಗೊಂಡ ಪರಿಣಾಮ ಯೋಧ ಗಾಯಗೊಂಡಿದ್ದಾನೆ.

ನಕ್ಸಲ್​ ಪೀಡಿತ ಜಿಲ್ಲೆಯಾಗಿರುವ ಗಡ್ಚಿರೋಲಿಯಲ್ಲಿ ಸಾಕಷ್ಟು ಯೋಧರನ್ನು ನಿಯೋಜಿಸಲಾಗಿದೆ. ಈ ಪೈಕಿ ಗಟ್ಟ ಎಟ್ಟಪಲ್ಲಿಯಲ್ಲಿ 191 ಅರೆಸೇನಾ ಯೋಧರನ್ನು ನಿಯೋಜಿಸಲಾಗಿತ್ತು. ಬಾಂಬ್​ ಸ್ಫೋಟಗೊಂಡ ಕೂಡಲೇ ಜನರು ಚೆಲ್ಲಾಪಿಲ್ಲಿಯಾಗಿದ್ದು, ಸ್ಫೋಟ ಸ್ಥಳದ ಸಮೀಪವೇ ಇದ್ದ ಸಿಆರ್​ಪಿಎಫ್​ ಯೋಧ ಗಾಯಗೊಂಡಿದ್ದಾನೆ.

ಸಂಗ್ರಹ ಚಿತ್ರ

ಯೋಧನ ಮಂಡಿಗೆ ಗಾಯವಾಗಿದ್ದು ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details