ಕರ್ನಾಟಕ

karnataka

By

Published : Apr 7, 2019, 10:23 AM IST

ETV Bharat / bharat

ಬಿಜೆಪಿ ಗೆಲ್ಲಲ್ಲ, ಮೋದಿ ಪ್ರಧಾನಿಯೂ ಆಗಲ್ಲ: ಪವಾರ್​ ಭವಿಷ್ಯ

ಮೋದಿ ಮತ್ತೆ ಪ್ರಧಾನಿಯಾಗಲ್ಲ ಎಂದು ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ(ಎನ್​ಸಿಪಿ) ಅಧ್ಯಕ್ಷ ಶರದ್​ ಪವಾರ್ ಪುನರುಚ್ಚರಿಸಿದ್ದಾರೆ.

ಮೋದಿ ಪ್ರಧಾನಿಯಾಗಲ್ಲ ಎಂದ ಶರದ್​ ಪವಾರ್

ನವದೆಹಲಿ:ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ ಅಧ್ಯಕ್ಷ ಶರದ್​ ಪವಾರ್ ಅವರು​ ಬಿಜೆಪಿ ಗೆಲ್ಲಲ್ಲ, ಮೋದಿ ಮತ್ತೆ ಪ್ರಧಾನಿಯೂ ಆಗಲ್ಲವೆಂದು ಪುನರುಚ್ಚರಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿಬಿಜೆಪಿಯೇಬಹುಮತ ಪಡೆಯುವ ಏಕೈಕ ಪಕ್ಷವೆಂದು ನಾಯಕರು ಹೇಳುತ್ತಿದ್ದಾರೆ. ಆದರೆ ಬಿಜೆಪಿಗೆ ಬಹುಮತ ಸಿಗದು. ಬಿಜೆಪಿಯದ್ದೇ ಸರ್ಕಾರ ರಚನೆ ಕನಸಿನ ಮಾತು. ಬೇರೆ ಪಕ್ಷಗಳ ನೆರವಿದ್ದರೆ ಮಾತ್ರ ಬಿಜೆಪಿ ಸರ್ಕಾರ ರಚಿಸಬಹುದು. ಆದರೆ ಆ ಪಕ್ಷಗಳು ಮೋದಿ ಬದಲಿಗೆ ಬೇರೊಬ್ಬರನ್ನು ಪ್ರಧಾನಿಯನ್ನಾಗಿ ಮಾಡಬಹುದು ಎಂದು ಪವಾರ್​ ವಿಶ್ಲೇಷಿಸಿದ್ದಾರೆ.

ದೇಶದ ಗ್ರಾಮೀಣ ಜನರು ಮೋದಿಯನ್ನು ಸೋಲಿಸಲು ಸಿದ್ಧರಾಗಿದ್ದಾರೆ. ಮೋದಿ ಸರ್ಕಾರದ ವಿರುದ್ಧ ಬಂಡೆದಿದ್ದಾರೆ ಎಂದು ಶರದ್​ ಪವಾರ್​ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಪಕ್ಷಗಳ ಮಹಾಘಟಬಂಧನ್​ನಲ್ಲಿ ಬಿರುಕು ಮೂಡಿದೆ ಎಂಬುದನ್ನು ಅಲ್ಲಗಳೆದಿರುವ ಪವಾರ್​, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಮಹಾಘಟಬಂಧನ ದಿಗ್ವಿಜಯ ಸಾಧಿಸುತ್ತೆ. ಉತ್ತರಪ್ರದೇಶದಲ್ಲಿ ಕಠಿಣ ಪರಿಸ್ಥಿತಿ ಇದ್ದು, ಕಾಂಗ್ರೆಸ್​ ಹಾಗೂ ಎಸ್​ಪಿ-ಬಿಎಸ್​ಪಿ ಒಗ್ಗೂಡುವ ಸಾಧ್ಯತೆ ಇದೆ ಎಂದು ಪವಾರ್​ ಹೇಳಿದರು.

ABOUT THE AUTHOR

...view details