ಕರ್ನಾಟಕ

karnataka

By

Published : Jun 17, 2019, 12:36 PM IST

Updated : Jun 17, 2019, 2:35 PM IST

ETV Bharat / bharat

ಕನ್ನಡದಲ್ಲೇ ಪ್ರಮಾಣ ಸ್ವೀಕರಿಸಿದ ಡಿವಿಎಸ್​, ಚೊಚ್ಚಲ ಬಾರಿ ಸಂಸತ್​ ಭವನ ಪ್ರವೇಶಿಸಿದ ತೇಜಸ್ವಿ

ಲೋಕಸಭೆಯ ಮುಂಗಾರು ಅಧಿವೇಶನ ಆರಂಭವಾಗಿದ್ದು ನೂತನವಾಗಿ ಆಯ್ಕೆಯಾದ ಸಂಸದರು, ಸಂಸತ್​ ಭವನ ಪ್ರವೇಶ ಮಾಡಿದ್ದಾರೆ.

ಸಂಸತ್​ ಪ್ರವೇಶ ಹೀಗಿತ್ತು

ನವದೆಹಲಿ:17 ನೇ ಲೋಕಸಭೆ ಅಧಿವೇಶನ ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ. ಮೊದಲ ಬಾರಿಗೆ ಆಯ್ಕೆ ಆದ ಸಂಸದರು, ಸಂಸತ್​ ಭವನಕ್ಕೆ ಇಂದು ಪ್ರವೇಶ ಮಾಡಿದರು. ಇದೇ ಮೊದಲ ಬಾರಿಗೆ ಆಯ್ಕೆ ಆದ ನಟ ಸನ್ನಿ ಡಿಯೋಲ್​, ತೇಜಸ್ವಿ ಸೂರ್ಯ, ರವಿ ಕಿಶನ್ ಪಾರ್ಲಿಮೆಂಟ್​ಗೆ ಆಗಮಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಇನ್ನು ಬಿಹಾರದ ಮಧುಬಾನಿಯಿಂದ ಆಯ್ಕೆ ಆದ ಡಾ. ಅಶೋಕ್​ ಯಾದವ್​, ಅಲ್ಲಿನ ಸ್ಥಳೀಯ ಸಂಸ್ಕೃತಿ ಬಿಂಬಿಸುವ ಟೋಪಿ ಧರಿಸಿ ಸಂಸತ್​ ಪ್ರವೇಶಿಸುವ ಮೂಲಕ ಗಮನ ಸೆಳೆದರು.

ಈ ನಡುವೆ ಕರ್ನಾಟಕದ ಬೆಂಗಳೂರು ದಕ್ಷಿಣದಿಂದ ಆಯ್ಕೆ ಆಗಿರುವ 28 ವರ್ಷದ ತೇಜಸ್ವಿ ಸೂರ್ಯ ಸಂಸತ್​ಗೆ ಆಗಮಿಸಿ ಗಮನ ಸೆಳೆದರು. ಪ್ರತಿಜ್ಞಾ ವಿಧಿ ಸ್ವೀಕಾರಕ್ಕೂ ಮುನ್ನ ಮಾತನಾಡಿದ ಅವರು, ಸಂವಿಧಾನವನ್ನ ರಕ್ಷಿಸುವ ದೇಗುಲವಾಗಿರುವ ಸಂಸ್ಥೆಯನ್ನ ಪ್ರವೇಶಿಸುತ್ತಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ಇನ್ನು ಪ್ರಧಾನಿ ಮೋದಿ, ಸಚಿವರಾದ ರಾಜನಾಥ್​ ಸಿಂಗ್, ಅಮಿತ್​ ಶಾ, ನಿತಿನ್​ ಗಡ್ಕರಿ, ಸ್ಮೃತಿ ಇರಾನಿ, ಶಿರೋಮಣಿ ಅಕಾಲಿ ದಳದ ಸಂಸದೆ ಸಚಿವೆ ಹರ್ಷಮಿತ್​ ಕೌರ್​​ ಬಾದಲ್​ 17 ನೇ ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯ ಸಂಸದ ಸದಾನಂದ ಗೌಡ ಅವರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು.

Last Updated : Jun 17, 2019, 2:35 PM IST

For All Latest Updates

TAGGED:

ABOUT THE AUTHOR

...view details