ಕರ್ನಾಟಕ

karnataka

ETV Bharat / bharat

ಕೊರೊನಾ ನಿಯಮ ಉಲ್ಲಂಘನೆ ಆರೋಪ: ಸಾಕ್ಷಿ ಮಹಾರಾಜ್‌ಗೆ ಬಲವಂತದ ಕ್ವಾರಂಟೈನ್ - ಸಾಕ್ಷಿ ಮಹಾರಾಜ್​​

ಕೊರೊನಾ ನಿಯಮ ಉಲ್ಲಂಘಿಸಿದ್ದಾರೆಂದು ಆರೋಪಿಸಿ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್​ ಅವರಿಗೆ ಜಾರ್ಖಂಡ್‌ ಸರ್ಕಾರ 14 ದಿನಗಳ ಕ್ವಾರಂಟೈನ್ ವಿಧಿಸಿದೆ.

BJP MP Sakshi Maharaj
BJP MP Sakshi Maharaj

By

Published : Aug 29, 2020, 7:13 PM IST

ರಾಂಚಿ:ಕೊರೊನಾ ನಿಯಮೋಲ್ಲಂಘನೆ ಕಾರಣಕ್ಕೆ ಉತ್ತರಪ್ರದೇಶದ ಉನ್ನಾವೋ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌​ಗೆ ಜಾರ್ಖಂಡ್​​ ಸರ್ಕಾರ 14 ದಿನಗಳ ಬಲವಂತದ ಕ್ವಾರಂಟೈನ್ ವಿಧಿಸಿದೆ.

ದನ್ಭಾದ್​ನಿಂದ ದೆಹಲಿಗೆ ಆಗಮಿಸುತ್ತಿದ್ದ ವೇಳೆ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದು, ಹೀಗಾಗಿ ಇಲ್ಲಿನ ಶಾಂತಿ ಭವನ ಆಶ್ರಮದಲ್ಲಿ ಕ್ವಾರಂಟೈನ್​ ವ್ಯವಸ್ಥೆ ಕಲ್ಪಿಸಲಾಗಿದೆ. ಜಾರ್ಖಂಡ್​ ಸರ್ಕಾರಕ್ಕೆ ಯಾವುದೇ ರೀತಿಯ ಮಾಹಿತಿ ನೀಡದೇ ಪ್ರವಾಸ ಕೈಗೊಂಡಿದ್ದರಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.

ಕ್ವಾರಂಟೈನ್​ಗೊಳಗಾದ ಬಿಜೆಪಿ ಸಂಸದ

ಸಾಕ್ಷಿ ಮಹಾರಾಜ್ ಪ್ರತಿಕ್ರಿಯಿಸಿ​, "ನಾನು ಭೇಟಿ ನೀಡುವುದಕ್ಕೂ ಮುಂಚಿತವಾಗಿ ರಾಜ್ಯ ಸರ್ಕಾರ ಸೇರಿದಂತೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದೇನೆ. ಆದರೂ ನನ್ನನ್ನು ತಡೆಹಿಡಿದು, ಅಸಭ್ಯವಾಗಿ ವರ್ತಿಸಿ, ಬಲವಂತವಾಗಿ ಕ್ವಾರಂಟೈನ್​ ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ.

ಜಾರ್ಖಂಡ್​ನಲ್ಲಿ ಧನ್ಬಾದ್​​ನಲ್ಲಿರುವ ಶಾಂತಿ ಭವನ ಆಶ್ರಮ ಸಾಕ್ಷಿ ಮಹಾರಾಜ್​ ಅವರಿಗೆ ಸೇರಿದೆ. ಇಲ್ಲಿ ತಮ್ಮ 97 ವರ್ಷದ ಅನಾರೋಗ್ಯಪೀಡಿತ ತಾಯಿ ಭೇಟಿಗಾಗಿ ಆಗಮಿಸಿದ್ದಾಗಿ ಅವರು ಹೇಳಿದ್ದಾರೆ. ಯಾವುದೇ ರೀತಿಯ ಸಾರ್ವಜನಿಕ ಸಭೆ ಅಥವಾ ಸಮಾರಂಭದಲ್ಲಿ ಭಾಗಿಯಾಗಲು ಬಂದಿಲ್ಲ. ಹೀಗಿದ್ದರೂ ಕಾರು ಬೆನ್ನತ್ತಿ ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ ಎಂದು ದೂರಿದರು.

ABOUT THE AUTHOR

...view details