ಕರ್ನಾಟಕ

karnataka

ETV Bharat / bharat

ಅಧಿಕಾರಿ ಮೇಲೆ ಬ್ಯಾಟ್​​ನಿಂದ ಹಲ್ಲೆ ನಡೆಸಿದ್ದ ಬಿಜೆಪಿ ಶಾಸಕನಿಗೆ ಶೋಕಾಸ್​ ನೋಟಿಸ್​ ಜಾರಿ!

ಕಳೆದ ವಾರ ಅಧಿಕಾರಿಯೊಬ್ಬನ ಮೇಲೆ ಬ್ಯಾಟ್​​ನಿಂದ ಹಲ್ಲೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ವಿಜಯ್​ ವರ್ಗಿಯಾಗೆ ಬಿಜೆಪಿ ಶೋಕಾಸ್​ ನೋಟಿಸ್​ ಜಾರಿ ಮಾಡಿದೆ.

By

Published : Jul 4, 2019, 7:19 PM IST

ಬಿಜೆಪಿ ಶಾಸಕನಿಗೆ ಶೋಕಾಸ್​ ನೋಟಿಸ್​

ಇಂದೋರ್​: ಕಳೆದ ವಾರ ಬಿಜೆಪಿ ಶಾಸಕ ಆಕಾಶ್​ ವಿಜಯವರ್ಗಿಯಾ​​ ಇಂದೋರ್​​ನ ಮುನ್ಸಿಪಾಲ್​ ಕಾರ್ಪೋರೇಷನ್ ಅಧಿಕಾರಿ ಮೇಲೆ ಬ್ಯಾಟ್​​ನಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪಕ್ಷ ಅವರಿಗೆ ಶೋಕಾಸ್​ ನೋಟಿಸ್​ ಜಾರಿ ಮಾಡಿದೆ.

ಕಾರ್ಪೋರೇಷನ್​ ಇಲಾಖೆಗೆ ತೆರಳಿದ್ದ ಶಾಸಕ ತಮ್ಮ ಸಹಚರರೊಂದಿಗೆ ಅಧಿಕಾರಿ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದರು. ಈ ಘಟನೆ ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣವಾಗಿತ್ತು. ಜತೆಗೆ ಶಾಸಕನನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಸಹ ನಡೆಸಿದ್ದರು. ತದನಂತರ ಜಾಮೀನು ಪಡೆದುಕೊಂಡು ಹೊರಬಂದಿದ್ದರು.

ಇನ್ನು ಘಟನೆ ನಡೆದ ಎರಡು ದಿನಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಕೂಡ ಇದೇ ಘಟನೆಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಅಲ್ಲಿನ ಬಿಜೆಪಿ ಈ ನಿರ್ಧಾರ ಕೈಗೊಂಡು ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ನೋಟಿಸ್​ ಜಾರಿಗೊಳಿಸಿದೆ. ಮಧ್ಯಪ್ರದೇಶದ ಬಿಜೆಪಿ ಶಾಸಕ ಕೈಲಾಶ್ ವಿಜಯ್​ವರ್ಗಿಯಾ ಪುತ್ರ ಆಕಾಶ್​ ವಿಜಯ್​ವರ್ಗಿಯಾ ಶಾಸಕನಾಗಿದ್ದು, ರೋಷಾವೇಶದಲ್ಲಿ ಸಾರ್ವಜನಿಕವಾಗಿ ಕ್ರಿಕೆಟ್​ ಬ್ಯಾಟ್​​ನಿಂದ ಬಾರಿಸಿ ವಿವಾದ ಸೃಷ್ಟಿಸಿಕೊಂಡಿದ್ದರು.

ABOUT THE AUTHOR

...view details