ಕರ್ನಾಟಕ

karnataka

ETV Bharat / bharat

ಹಸಿವಿನಿಂದ ಪ್ರಾಣತೆತ್ತ ಮುಗ್ಧ ಜೀವಗಳು : ಮನಕಲಕುವಂತಿದೆ ಬಿಹಾರದ ಈ ಘಟನೆ - ಬಿಹಾರದ ವಿಶೇಷ ಶ್ರಮಿಕ್ ರೈಲಿನಲ್ಲಿ ಸಾವು

ಲಾಕ್​ಡೌನ್​ ಹಲವರ ಜೀವನವನ್ನು ಬೀದಿಗೆ ತಂದಿದೆ. ಇನ್ನೂ ಅನೇಕರಿಗೆ ಸಾವು ಹಸಿವಿನ ರೂಪದಲ್ಲಿ ಬಂದಿದೆ. ಕೊರೊನಾ ಕೇವಲ ಆರೋಗ್ಯ ಮಾತ್ರವಲ್ಲ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಜೀವನವನ್ನು ಅಲ್ಲೋಲ- ಕಲ್ಲೋಲ ಮಾಡಿದೆ. ಇಂತಹುದೇ ಎರಡು ಮನಕಲಕುವ ಘಟನೆಗಳು ಬಿಹಾರದ ಶ್ರಮಿಕ್​ ರೈಲಿನಲ್ಲಿ ಸಂಭವಿಸಿದ್ದು, ಎಂಥವರ ಕರುಳಿಗೂ ಚುರ್​ ಎನ್ನಿಸದೇ ಇರದು.

ಹಸಿವಿನಿಂದ ಬಳಲಿ ಪ್ರಾಣತೆತ್ತ ಮುಗ್ಧ ಜೀವಗಳು
ಹಸಿವಿನಿಂದ ಬಳಲಿ ಪ್ರಾಣತೆತ್ತ ಮುಗ್ಧ ಜೀವಗಳು

By

Published : May 27, 2020, 9:13 PM IST

Updated : May 27, 2020, 10:21 PM IST

ಮುಜಫರ್​​ಪುರ (ಬಿಹಾರ):ನಾಲ್ಕು ವರ್ಷದ ಬಾಲಕ ಮತ್ತು ಮೂವತ್ತೈದು ವರ್ಷದ ವಲಸೆ ಮಹಿಳೆ ಬಿಹಾರದ ವಿಶೇಷ ಶ್ರಮಿಕ್ ರೈಲಿನಲ್ಲಿ ಸಾವನ್ನಪ್ಪಿದ್ದಾರೆ. ಹಸಿವು ಮತ್ತು ಅನಾರೋಗ್ಯದಿಂದ ಬಳಲಿ ಎರಡು ಜೀವಗಳು ಪ್ರಾಣತೆತ್ತಿವೆ ಎಂದು ಹೇಳಲಾಗುತ್ತಿದೆ.

ಮೃತ ಮಹಿಳೆ ಅರ್ವಿನಾ ಖತುನ್ ಎಂದು ಗುರುತಿಸಲಾಗಿದ್ದು, ಅಹ್ಮದಾಬಾದ್‌ನಲ್ಲಿ ಕೆಲಸ ಮಾಡುತ್ತಿರುವ ತನ್ನ ಸೋದರ ಮಾವ ಮೊಹಮ್ಮದ್ ವಾಜೀರ್ ಜೊತೆ ಪ್ರಯಾಣಿಸುತ್ತಿದ್ದಳು. ಅರ್ವಿನಾ ಮತ್ತು ವಾಜೀರ್ ಲಾಕ್‌ಡೌನ್‌ ಹಿನ್ನೆಲೆ ಅಲ್ಲಿಯೇ ಸಿಲುಕಿಕೊಂಡಿದ್ದ. ಮೇ 23 ರಂದು ಶ್ರಮಿಕ್ ವಿಶೇಷ ರೈಲಿನಲ್ಲಿ ತಮ್ಮ ತವರೂರಿನೆಡೆಗೆ ಪ್ರಯಾಣ ಆರಂಭಿಸಿದ್ದರು. ವರದಿಗಳ ಪ್ರಕಾರ, ರೈಲು ಮಧ್ಯಾಹ್ನ 3 ರ ಸುಮಾರಿಗೆ ಮುಜಾಫರ್​ಪುರ ನಿಲ್ದಾಣವನ್ನು ತಲುಪಿತು. ಆದರೆ, ಅರ್ವಿನಾ ಮಧ್ಯಾಹ್ನ 12 ಗಂಟೆೆ ಅವಧಿಗೆ ಹಸಿವು ಮತ್ತು ತೀವ್ರವಾದ ಬಾಯಾರಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಸಹಪ್ರಯಾಣಿಕರು ಆರೋಪಿಸಿದ್ದಾರೆ. ಆದರೆ ರೈಲಿನಲ್ಲಿದ್ದ ಪ್ರಯಾಣಿಕರ ಆರೋಪವನ್ನು ನಿರಾಕರಿಸಿದ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ, ತನ್ನ ತಂದೆ ಮೊಹಮ್ಮದ್ ಪಿಂಟೂ ಅವರೊಂದಿಗೆ ಪ್ರಯಾಣಿಸುತ್ತಿದ್ದ ಮಗು ಮೊಹಮ್ಮದ್ ಇರ್ಷಾದ್ ಅಸುನೀಗಿದೆ. ತಂದೆ-ಮಗ ಮೇ 25 ರಂದು ಅಹಮದಾಬಾದ್‌ನಿಂದ ರೈಲು ಹತ್ತಿದ್ದರು. ಇವರು ತಮ್ಮ ತವರೂರು ಜಮೀನು ತುಲಾರಾಮ್ ಘಾಟ್ ಕಡೆಗೆ ಹೋಗುತ್ತಿದ್ದರು. ವರದಿಯ ಪ್ರಕಾರ, ಪ್ರಯಾಣದ ಸಮಯದಲ್ಲಿ ಪುತ್ರ ಇರ್ಷಾದ್ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಪರಿಣಾಮ ತನ್ನೂರು ತಲುಪುವ ಮೊದಲೇ ಪ್ರಾಣಪಕ್ಷಿ ಹಾರಿಹೋಗಿದೆ.

ಮುಜಫರ್​ಪುರದ ರೈಲ್ವೆ ಡಿಎಸ್ಪಿ ರಾಮ ಕಾಂತ್ ಉಪಾಧ್ಯಾಯ, ಮಗು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿತ್ತು. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಶ್ರಮಿಕ್ ರೈಲು ಗುಜರಾತ್‌ನಿಂದ ಬರುತ್ತಿತ್ತು. ಬಿಹಾರದ ಮಧುಬಾನಿ ಕಡೆಗೆ ಸಾಗುತ್ತಿತ್ತು. ಈ ಪ್ರಕರಣದ ಬಗ್ಗೆ ನಾವು ತನಿಖೆ ಆರಂಭಿಸುತ್ತೇವೆ ಎಂದು ಅವರು ಹೇಳಿದರು.

ಅರ್ವಿನಾ ಮತ್ತು ಇರ್ಷಾದ್ ಅವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಅದೇನೇ ಇರಲಿ ಒಂದುಕಡೆ ಹಸಿವು ಮತ್ತೊಂದೆಡೆ ಅನಾರೋಗ್ಯ ಎರಡು ಮುಗ್ಧ ಜೀವಗಳನ್ನು ಬಲಿಪಡೆದಿರುವುದು ನಿಜಕ್ಕೂ ಶೋಚನೀಯ ಸಂಗತಿ.

Last Updated : May 27, 2020, 10:21 PM IST

ABOUT THE AUTHOR

...view details