ನವದೆಹಲಿ:ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಎಂಎಸ್ ಧೋನಿ, ಭಾರತೀಯ ಸೇನೆಯ ಪ್ಯಾರಾ ಸ್ಪೆಷಲ್ ಪೋರ್ಸ್ನ ಲಾಂಛನವಾದ ರೆಜಿಮೆಂಟಲ್ ಡ್ಯಾಗರ್ನ ಚಿತ್ರವಿದ್ದ ವಿಕೆಟ್ ಕೀಪಿಂಗ್ ಗ್ಲೌಸ್ ಧರಿಸಿದ್ದು, ತೀವ್ರ ವಿವಾದ ಸೃಷ್ಟಿಸಿದ ಬಳಿಕ ಪರ ವಿರೋಧದ ಮಾತುಗಳು ಕೇಳಿಬರುತ್ತಿವೆ.
'ಬಲಿದಾನ್' ಬ್ಯಾಡ್ಜ್ ಭಾರತದ ಪ್ರತಿಷ್ಠೆ: ಧೋನಿ ಪರ ಕೇಂದ್ರ ಸಚಿವರ ಬ್ಯಾಟ್ -
ಬಲಿದಾನ್ ಬ್ಯಾಡ್ಜ್ ಧರಿಸುವುದು ಯಾವುದೇ ರಾಜಕೀಯ/ ಧರ್ಮ/ ವರ್ಣಭೇದ ನೀತಿಯ ಧೋರಣೆಯಲ್ಲ. ಇದು ನಮ್ಮ ರಾಷ್ಟ್ರದ ಪ್ರತಿಷ್ಠೆಯ ಸಂಕೇತ ಎಂಬುದನ್ನು ಐಸಿಸಿ ಅರ್ಥಮಾಡಿಕೊಳ್ಳಬೇಕು: ವಿ.ಕೆ. ಸಿಂಗ್

ಎಂಎಸ್ ಧೋನಿ
ಈ ನಡುವೆ ಕೇಂದ್ರ ಸಚಿವ ಹಾಗೂ ಜನರಲ್ (ನಿವೃತ್ತ) ವಿ.ಕೆ. ಸಿಂಗ್ ಅವರು ಎಂ.ಎಸ್. ಧೋನಿ ಪರವಾಗಿ ಮಾತನಾಡಿದ್ದಾರೆ. 'ಧೋನಿ ' ಅವರು 'ಬಲಿದಾನ್' ಬ್ಯಾಡ್ಜ್ ಚಿನ್ಹೆ ಇರುವ ವಿಕೆಟ್ ಕೀಪಿಂಗ್ ಗ್ಲೌಸ್ ಧರಿಸಿ ಭಾರತೀಯ ಸೇನೆಯ ಪ್ಯಾರಾ ಸ್ಪೆಷಲ್ ಪೋರ್ಸ್ ಮೇಲಿರುವ ಅವರ ಪ್ರೀತಿ ಹಾಗೂ ಗೌರವ ತೋರಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
ಬಲಿದಾನ್ ಬ್ಯಾಡ್ಜ್ ಧರಿಸುವುದು ಯಾವುದೇ ರಾಜಕೀಯ/ ಧರ್ಮ/ ವರ್ಣಭೇದ ನೀತಿಯ ಧೋರಣೆಯಲ್ಲ. ಇದು ನಮ್ಮ ರಾಷ್ಟ್ರದ ಪ್ರತಿಷ್ಠೆಯ ಸಂಕೇತ ಎಂಬುದನ್ನು ಐಸಿಸಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.