ನವದೆಹಲಿ:ಭಾರತದ ದಾಳಿಯಿಂದ ಉಗ್ರರ ನೆಲೆಗಳು ಧ್ವಂಸಗೊಂಡ ಕುರುಹು ಕಣ್ಣೆದುರೇ ಇದ್ದರೂ ಪಾಕಿಸ್ತಾನ ಇದನ್ನು ಒಪ್ಪುತ್ತಿಲ್ಲವಷ್ಟೇ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಬಿ.ಎಸ್. ಧನೋವಾ ಟೀಕಿಸಿದ್ದಾರೆ.
ಭಾರತ ತನ್ನ ಟಾರ್ಗೆಟ್ನಂತೆಯೇ ಮಿರಾಜ್ 2000 ಯುದ್ಧ ವಿಮಾನದ ಮೂಲಕ ಬಾಲಕೋಟ್ನಲ್ಲಿನ ಉಗ್ರರ ನೆಲೆ ಮೇಲೆ ದಾಳಿ ಮಾಡಿತ್ತು. ಆದರೆ ಏರ್ಸ್ಟ್ರೈಕ್ನಿಂದ ತನಗೆ ಯಾವುದೇ ಹಾನಿಯಾಗಿಲ್ಲವೆಂದು ಪಾಕ್ ನಾಟಕವಾಡುತ್ತಿದೆ ಎಂದರು.
ಕಣ್ಣೆದುರೇ ಇರುವ ಸತ್ಯ ಕಾಣದೇ ಪಾಕ್ ಎಷ್ಟು ಬಾರಿ ಕತ್ತು ತಿರುಗಿಸುತ್ತದೆ. ಈ ವೇಳೆ ನನಗೆ ಡೈಲಾನ್ ನೆನಪಾಗುತ್ತಾನೆ ಎಂದ ಅವರು, ಅಮೆರಿಕಾದ ಕಲಾವಿದ ಬಾಬ್ ಡೈಲಾನ್ನ 'ಮೈ ಫ್ರೆಂಡ್, ಈಸ್ ಬ್ಲೋಯಿನ್ ಇನ ದ ವಿಂಡ್' ಹಾಡನ್ನು ನೆನಪಿಸಿಕೊಂಡರು.
ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತ ಫೆಬ್ರವರಿ 26ರಂದು ಪಾಕ್ ಆಕ್ರಮಿತ ಬಾಲಕೋಟ್ ಮೇಲೆ ಏರ್ಸ್ಟ್ರೈಕ್ ನಡೆಸಿ, ಜೈಷೆ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಆದರೆ ಅಂದಿನಿಂದಲೂ ಪಾಕ್ ತನಗೆ ಯಾವುದೇ ನಷ್ಟವಾಗಿಲ್ಲ ಎನ್ನುವ ಮೂಲಕ ಉಗ್ರರ ಪೋಷಣೆ ಆರೋಪದಿಂದ ನುಣುಚಿಕೊಳ್ಳುತ್ತಿದೆ. ಇತ್ತೀಚೆಗೆ ಭಾರತಕ್ಕೆ ನೀಡಿದ ಪ್ರಾಥಮಿಕ ವರದಿಯಲ್ಲೂ ಇದನ್ನೇ ಉಲ್ಲೇಖಿಸಿದೆ.