ಕರ್ನಾಟಕ

karnataka

ETV Bharat / bharat

'ರಾ' ಮುಖ್ಯಸ್ಥ ಗಾದಿಗೇರಿದ ಬಾಲಾಕೋಟ್ ದಾಳಿ ರೂವಾರಿ..!

ಗೋಯಲ್, 1984ರ ಪಂಜಾಬ್​ ಕೇಡರ್​ನ ಐಪಿಎಸ್​ ಅಧಿಕಾರಿಯಾಗಿದ್ದು, ​ ಇದೇ 1984ರ  ಅಸ್ಸೋಂ ಕೇಡರ್​ನ ಐಪಿಎಸ್​ ಅಧಿಕಾರಿಯಾಗಿದ್ದ  ಅರವಿಂದ ಕುಮಾರ್​ ರೀಸರ್ಚ್​ ಆ್ಯಂಡ್ ಅನಾಲಿಸಿಸ್ ವಿಂಗ್​ನ ಉನ್ನತ ಹುದ್ದೆಗೇರಿದ್ದಾರೆ.

By

Published : Jun 26, 2019, 1:56 PM IST

ಸಮಂತ್ ಗೋಯಲ್

ನವದೆಹಲಿ: ಬಾಲಾಕೋಟ್​ ಉಗ್ರರ ನೆಲೆಗಳ ಮೇಲಿನ ವಾಯುದಾಳಿಯನ್ನು ಕ್ರಮಬದ್ಧವಾಗಿ ರೂಪಿಸಿದ್ದ ಚಾಣಾಕ್ಷ ಸಮಂತ್ ಗೋಯಲ್​ರನ್ನು​​​​ ರಿಸರ್ಚ್​ ಆ್ಯಂಡ್​ ಅನಾಲಿಸಿಸ್​ ವಿಂಗ್​ (RAW) ಮುಖ್ಯಸ್ಥರನ್ನಾಗಿ ಹಾಗೂ ಅರವಿಂದ ಕುಮಾರ್​​ರನ್ನು ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಗೋಯಲ್, 1984ರ ಪಂಜಾಬ್​ ಕೇಡರ್​ನ ಐಪಿಎಸ್​ ಅಧಿಕಾರಿಯಾಗಿದ್ದು, ​ ಇದೇ 1984ರ ಅಸ್ಸೋಂ ಕೇಡರ್​ನ ಐಪಿಎಸ್​ ಅಧಿಕಾರಿಯಾಗಿದ್ದ ಅರವಿಂದ ಕುಮಾರ್​ ರೀಸರ್ಚ್​ ಆ್ಯಂಡ್ ಅನಾಲಿಸಿಸ್ ವಿಂಗ್​ನ ಉನ್ನತ ಹುದ್ದೆಗೇರಿದ್ದಾರೆ. ಅನಿಲ್​ ಧಸ್ಮನಾ ಸ್ಥಾನಕ್ಕೆ ಗೋಯಲ್ ಹಾಗೂ ರಾಜೀವ್ ಜೈನ್ ಹುದ್ದೆಗೆ ಅರವಿಂದ್ ಕುಮಾರ್ ಆಗಮಿಸಿದ್ದು, ಪ್ರಧಾನಿ ಮೋದಿ ಈ ಆದೇಶ ಹೊರಡಿಸಿದ್ದಾರೆ.

1990ರಲ್ಲಿ ಪಂಜಾಬ್​ನಲ್ಲಿನ ಉಗ್ರರ ಉಪಟಳ ಮಿತಿಮೀರಿದ್ದ ಸಂದರ್ಭದಲ್ಲಿ ಪರಿಸ್ಥಿತಿ ಉತ್ತಮವಾಗಿ ನಿಭಾಯಿಸಿದ್ದರು. ಅರವಿಂದ್​ ಕುಮಾರ್ ದೇಶದ ಭದ್ರತೆಗೆ ಅಡ್ಡಿಪಡಿಸುವ ಆತಂರಿಕ ಶಕ್ತಿಗಳನ್ನು ಮಟ್ಟಹಾಕುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ABOUT THE AUTHOR

...view details