ಕರ್ನಾಟಕ

karnataka

ETV Bharat / bharat

ಶಬರಿಮಲೆಗೆ ತೆರಳಿದ್ದ ಅಯ್ಯಪ್ಪ ಸ್ವಾಮಿ ಭಕ್ತ ಪಂಪಾ ನದಿಯಲ್ಲಿ ಶವವಾಗಿ ಪತ್ತೆ - Ayyappa devotee body found in river

ಕರ್ನಾಟಕ ಮೂಲದ 11 ಜನ ಅಯ್ಯಪ್ಪ ಭಕ್ತರು ಸೋಮವಾರ ರಾತ್ರಿ ಪಂಪಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಪ್ರದೀಪ್​ ನೀರುಪಾಲಾಗಿದ್ದರು. ಇದೀಗ ಪ್ರದೀಪ್​ ಶವವಾಗಿ ಪತ್ತೆಯಾಗಿದ್ದಾರೆ.

Ayyappa devotee body found in mini pamba
ಅಯ್ಯಪ್ಪ ಸ್ವಾಮಿ ಭಕ್ತ ಪಂಬಾ ನದಿಯಲ್ಲಿ ಶವವಾಗಿ ಪತ್ತೆ

By

Published : Dec 24, 2019, 7:00 PM IST

ಮಲಪ್ಪುರಂ(ಕೇರಳ) : ಶಬರಿಮಲೆಗೆ ತೆರಳಿ ಅಲ್ಲಿನ ಚಿಕ್ಕ ಪಂಪಾ ನದಿ ಪಾಲಾಗಿದ್ದ ಅಯ್ಯಪ್ಪ ಭಕ್ತನ ಮೃತದೇಹ ಪತ್ತೆಯಾಗಿದೆ.

ಮೃತನನ್ನು ಪ್ರದೀಪ್​ ಎಂದು ಗುರುತಿಸಲಾಗಿದೆ. ಕರ್ನಾಟಕ ಮೂಲದ 11 ಜನ ಅಯ್ಯಪ್ಪ ಭಕ್ತರು ಸೋಮವಾರ ರಾತ್ರಿ ಪಂಪಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಪ್ರದೀಪ್​ ನೀರುಪಾಲಾಗಿದ್ದರು. ಇದೀಗ ಪ್ರದೀಪ್​ ಶವವಾಗಿ ಪತ್ತೆಯಾಗಿದ್ದಾರೆ.

ಪೊನ್ನಾನಿಯಲ್ಲಿ ತಾವು ತಂಗಿದ್ದ ಹೋಟೆಲ್​ ಸಮೀಪವೇ ಇರುವ ಚಿಕ್ಕ ನದಿಯಲ್ಲಿ ಸ್ನಾನಕ್ಕೆ ಹೋದಾಗ ಈ ದುರ್ಘಟನೆ ಸಂಭವಿಸಿದೆ. ಅಗ್ನಿಶಾಮ ಸಿಬ್ಬಂದಿ ಮತ್ತು ಸ್ಥಳೀಯರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ. ಮೃತದೇಹವನ್ನು ಪೊನ್ನಾನಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಇನ್ನು, ಪ್ರದೀಪ್​ ಯಾವ ಊರಿನವರು, ಯಾರೊಂದಿಗೆ, ಎಷ್ಟು ದಿನಗಳ ಹಿಂದೆ ಶಬರಿಮಲೆಗೆ ತೆರಳಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ABOUT THE AUTHOR

...view details