ಕರ್ನಾಟಕ

karnataka

ETV Bharat / bharat

ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸುತ್ತಿದ್ದ ಮೊಹಮ್ಮದ್ ಶರೀಫ್​ಗೆ ಪದ್ಮ ಪ್ರಶಸ್ತಿ ಗೌರವ - ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಅನಾಥ ಶವಗಳ ಅಂತ್ಯಸಂಸ್ಕಾರ ನಡೆಸುತ್ತಿದ್ದ ಉತ್ತರಪ್ರದೇಶದ ಮೊಹಮ್ಮದ್ ಶರೀಫ್​ಗೆ ಭಾರತ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ.

Mohd Sharif, who has been named for Padma Shri ,ಮೊಹಮ್ಮದ್ ಶರೀಫ್​ಗೆ ಪದ್ಮ ಪ್ರಶಸ್ತಿ
ಮೊಹಮ್ಮದ್ ಶರೀಫ್​ಗೆ ಪದ್ಮ ಪ್ರಶಸ್ತಿ

By

Published : Jan 26, 2020, 3:34 PM IST

Updated : Jan 26, 2020, 3:49 PM IST

ಅಯೋಧ್ಯೆ:ಅನಾಥ ಶವಗಳ ಅಂತ್ಯಸಂಸ್ಕಾರ ನಡೆಸುತ್ತಿದ್ದ ಉತ್ತರ ಪ್ರದೇಶದ ಮೊಹಮ್ಮದ್ ಶರೀಫ್ ಅವರಿಗೆ ಭಾರತ ಸರ್ಕಾರ, ದೇಶದ ನಾಲ್ಕನೇ ಅತಿದೊಡ್ಡ ನಾಗರಿಕ ಪ್ರಶಸ್ತಿ 'ಪದ್ಮಶ್ರೀ' ನೀಡಿ ಗೌರವಿಸಿದೆ.

ಭಾರತ ಸರ್ಕಾರ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನ ಗಣರಾಜ್ಯೋತ್ಸವ ಮುನ್ನಾ ದಿನ ನಿನ್ನೆ ಘೋಷಣೆ ಮಾಡಿತ್ತು. ಸಮಾಜ ಸೇವೆ ಹಿನ್ನೆಲೆಯಲ್ಲಿ ಮೊಹಮ್ಮದ್ ಶರೀಫ್​ ಅವರಿಗೆ ಪದ್ಮಶ್ರಿ ಪ್ರಶಸ್ತಿ ನೀಡಲಾಗಿದೆ.

ಈ ಬಗ್ಗೆ ಮಾತನಾಡಿರುವ ಶರೀಫ್, 27 ವರ್ಷಗಳ ಹಿಂದೆ ನನ್ನ ಮಗನನ್ನು ಸುಲ್ತಾನಪುರದಲ್ಲಿ ಕೊಲೆ ಮಾಡಲಾಗಿತ್ತು. ಒಂದು ತಿಂಗಳ ನಂತರ ನನಗೆ ಈ ವಿಷಯ ತಿಳಿಯಿತು. ಅಂದಿನಿಂದ ಅನಾಥ ಶವಗಳ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ನಾನು ಇಲ್ಲಿಯವರೆಗೆ 3,000 ಹಿಂದೂಗಳು ಮತ್ತು 2,500 ಮುಸ್ಲಿಮರ ಶವಗಳ ಅಂತ್ಯಸಂಸ್ಕಾರ ಮಾಡಿದ್ದೇನೆ ಎಂದು ಮೊಹಮ್ಮದ್ ಶರೀಫ್ ತಿಳಿಸಿದರು.

Last Updated : Jan 26, 2020, 3:49 PM IST

ABOUT THE AUTHOR

...view details