ಕರ್ನಾಟಕ

karnataka

ETV Bharat / bharat

ಅಂತಿಮ ಹಂತ ತಲುಪಿದ ಅಯೋಧ್ಯೆ ಭೂ ವಿವಾದ ಪ್ರಕರಣದ ವಿಚಾರಣೆ: 144 ಸೆಕ್ಷನ್​​​​ ಜಾರಿ

ಒಂದು ವಾರದ ದಸರಾ ರಜೆ ಬಳಿಕ ಸುಪ್ರೀಂಕೋರ್ಟ್​​ನಲ್ಲಿ ಇಂದಿನಿಂದ ಮತ್ತೆ ಅಯೋಧ್ಯೆ ಭೂ ವಿವಾದ ಪ್ರಕರಣದ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ 144 ಸೆಕ್ಷನ್​​ ಜಾರಿಗೊಳಿಸಲಾಗಿದೆ.

By

Published : Oct 14, 2019, 8:36 AM IST

ಅಯೋಧ್ಯೆ ಭೂವಿವಾದ

ಅಯೋಧ್ಯೆ (ಉತ್ತರ ಪ್ರದೇಶ):ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿತ ಮಹತ್ವದ ವಿಚಾರಣೆ ಅಂತಿಮ ಹಂತಕ್ಕೆ ಬಂದಿದ್ದು, ಸುಪ್ರೀಂಕೋರ್ಟ್​​ನಲ್ಲಿ ಇಂದಿನಿಂದ ಮತ್ತೆ ವಿಚಾರಣೆ ಆರಂಭಗೊಳ್ಳಲಿದೆ. ಒಂದು ವಾರದ ದಸರಾ ರಜೆ ಬಳಿಕ ಇಂದಿನಿಂದ ಮತ್ತೆ ವಿಚಾರಣೆ ನಡೆಯಲಿದೆ.

ದಶಕಗಳ ಕಾಲ ವಿವಾದಕ್ಕೆ ತುತ್ತಾಗಿರುವ ಪ್ರಕರಣ ಕೋರ್ಟ್​ನಲ್ಲಿ ವಿಚಾರಣೆಯ ಹಂತದಲ್ಲಿದೆ. ಇದೀಗ ಅಯೋಧ್ಯೆ ಭೂ ವಿವಾದ ತೀರ್ಪಿನ ಹಂತ ತಲುಪಿದೆ. ಇಂದಿನಿಂದ ವಿಚಾರಣೆ ಶುರುವಾಗುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ 144 ಸೆಕ್ಷನ್​​ ಜಾರಿಗೊಳಿಸಲಾಗಿದೆ. ಈಗಾಗಲೇ 37 ದಿನಗಳವರೆಗಿನ ವಿಚಾರಣೆ ನಡೆದಿದ್ದು, ಇವತ್ತು 38ನೇ ದಿನದ ವಿಚಾರಣೆ ಆರಂಭಗೊಳ್ಳಲಿದೆ.

ಕೋರ್ಟ್​ ಅಕ್ಟೋಬರ್ 17ರಂದು ಪ್ರಕರಣದ ವಿಚಾರಣೆ ಕೊನೆಗೊಳಿಸಲಿದ್ದು, ಅಂದೇ ತೀರ್ಪು ಪ್ರಕಟಿಸುವ ಸಾಧ್ಯತೆಗಳಿವೆ. ಮುಖ್ಯ ನ್ಯಾ. ರಂಜನ್ ಗೊಗೊಯಿ ನೇತೃತ್ವದ ಪೀಠದಲ್ಲಿ ಎಸ್​.ಎ.ಬೋಪ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್​.ಅಬ್ದುಲ್ ನಜೀರ್ ಇದ್ದಾರೆ.

ABOUT THE AUTHOR

...view details