ಕರ್ನಾಟಕ

karnataka

ETV Bharat / bharat

ತೆಲಂಗಾಣ: ಸಿಎಂ ಮನೆ ಮುಂದೆಯೇ ಆಟೋ ಚಾಲಕ ಆತ್ಮಹತ್ಯೆಗೆ ಯತ್ನ! - ಆಟೋ ರಿಕ್ಷಾ ಚಾಲಕರಿಗಾಗಿ ಹೊಸ ಯೋಜನೆ

ಆಟೋ ರಿಕ್ಷಾ ಚಾಲಕರಿಗಾಗಿ ತರಲಾಗಿರುವ ಹೊಸ ಯೋಜನೆಯನ್ವಯ ತನಗೆ ಮನೆ ನೀಡಿಲ್ಲವೆಂದು ಆರೋಪಿಸಿ ಆಟೋ ರಿಕ್ಷಾ ಚಾಲಕನೋರ್ವ ಸಿಎಂ ಮನೆ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

suicide attempt

By

Published : Sep 18, 2020, 3:54 PM IST

ಹೈದರಾಬಾದ್ (ತೆಲಂಗಾಣ):ಆಟೋ ರಿಕ್ಷಾ ಚಾಲಕನೊಬ್ಬ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ನಿವಾಸ ಪ್ರಗತಿ ಭವನದ ಎದುರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.

ಆಟೋ ರಿಕ್ಷಾ ಚಾಲಕರಿಗಾಗಿ ತರಲಾಗಿರುವ ಹೊಸ ಯೋಜನೆಯನ್ವಯ ತನಗೆ ಮನೆ ನೀಡಿಲ್ಲ ಎಂದು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆಟೋ ಚಾಲಕನನ್ನು ಚಂದರ್ ಎಂದು ಗುರುತಿಸಲಾಗಿದೆ. ಆತ ತನ್ನ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆಲಂಗಾಣ ರಾಜ್ಯ ರಚನೆಗೆ 2010ರಲ್ಲಿಯೂ ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಚಂದರ್ ಹೇಳಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details