ಹೈದರಾಬಾದ್:ದೇಶಾದ್ಯಂತ ಪ್ರತಿದಿನ ಒಂದಿಲ್ಲೊಂದು ಅತ್ಯಾಚಾರದಂತಹ ಅಮಾನವೀಯ ಘಟನೆ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದ್ದು, ಇದರ ಮಧ್ಯೆ ಹೈದರಾಬಾದ್ನಲ್ಲಿ ಇನ್ನೊಂದು ಅಸಹ್ಯಕರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಹೈದರಾಬಾದ್ನ ಕುತುಬುಲ್ಲಾಪುರ್ದಲ್ಲಿ ಮಂಗಳಮುಖಿ ಮೇಲೆ ಆಟೋ ಚಾಲಕನೋರ್ವ ಅತ್ಯಾಚಾರ ಯತ್ನ ನಡೆಸಿದ್ದು, ಇದರಿಂದ ಆಕೆ ತಪ್ಪಿಸಿಕೊಂಡಿದ್ದಾಗಿ ತಿಳಿದು ಬಂದಿದೆ.
ಡ್ರೈವರ್ ಮಹೇಶ್ ಎಂಬಾತನ ಆಟೋದಲ್ಲಿ ಮಂಗಳಮುಖಿ ಹತ್ತಿಕೊಂಡಿದ್ದಾಳೆ. ಈ ವೇಳೆ ಆಕೆಯನ್ನ ನಿರ್ದಿಷ್ಟ ಜಾಗಕ್ಕೆ ಕರೆದುಕೊಂಡು ಹೋಗುವ ಬದಲು ಬೇರೆ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ. ಆದರೆ ಆತನಿಂದ ಮಂಗಳಮುಖಿ ತಪ್ಪಿಸಿಕೊಂಡಿದ್ದಾಳೆ.
ಇದಾದ ಮರುದಿನ ಸ್ನೇಹಿತರ ಜತೆ ಮಹೇಶ್ ವಾಸವಾಗಿದ್ದ ಸ್ಥಳಕ್ಕೆ ಆಗಮಿಸಿ ಆತನ ಮೇಲೆ ಹಲ್ಲೆ ನಡೆಸಿದ್ದು, ತದನಂತರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾಳೆ. ಇದೀಗ ಆಟೋ ಡ್ರೈವರ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.