ಕರ್ನಾಟಕ

karnataka

ETV Bharat / bharat

ದಿಟ್ಟ ಪ್ರತ್ಯುತ್ತರ ಸ್ವಾಗತಾರ್ಹ.. ಕೇಂದ್ರದ ಜತೆ ಕಲ್ಲುಬಂಡೆ ರೀತಿ ನಿಲ್ಬೇಕು- ಸಂಸದ ಒವೈಸಿ - Airstrike

ಪುಲ್ವಾಮಾ ದಾಳಿಯಾದ 2-3 ದಿನದಲ್ಲೇ ಭಾರತ ಪ್ರತೀಕಾರ ತೆಗೆದುಕೊಳ್ಳುವ ನಿರೀಕ್ಷೆಯಿತ್ತು. ಆದ್ರೇ, ಕೊನೆಗೂ ಭಾರತ ದಿಟ್ಟ ಪ್ರತ್ಯುತ್ತರ ನೀಡಿದೆ. ನಿಜಕ್ಕೂ ಇದನ್ನ ಹೆಮ್ಮೆಯಿಂದಲೇ ಸ್ವಾಗತಿಸಬೇಕು ಎಐಎಂಐಎಂ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.

ಕೃಪೆ: Twitter

By

Published : Feb 26, 2019, 6:04 PM IST

ನವದೆಹಲಿಯಲ್ಲಿ ಸುದ್ದಿಸಂಸ್ಥೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಗಡಿಭದ್ರತಾ ರೇಖೆಗುಂಟ ವಾಯುಸೇನೆ ಏರ್‌ಸ್ಟ್ರೈಕ್‌ ಮೂಲಕ ಉಗ್ರರ ಅಡಗುತಾಣಗಳನ್ನ ಧ್ವಂಸಗೊಳಿಸಿರುವುದನ್ನ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ, ನಾವು ಈಗ ಕೇಂದ್ರ ಸರ್ಕಾರಕ್ಕೆ ಬೆಂಬಲವಾಗಿ ನಿಂತುಕೊಳ್ಳಬೇಕು ಅಂತ ಹೇಳಿದ್ದಾರೆ.

ಉಗ್ರರ ಅಡಗುತಾಣಗಳ ಮೇಲಿನ ಈ ದಾಳಿ ನಾನ್‌ ಮಿಲ್ಟ್ರಿ ಸ್ಕ್ರೈಕ್‌ ಅಂತ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹೇಳಿದ್ದಾರೆ. ಇಂಥ ಒಂದು ಎದೆಗಾರಿಕೆಯ ನಡೆಯನ್ನ ಕೇಂದ್ರ ಸರ್ಕಾರ ಸಾಕಷ್ಟು ಮೊದಲೇ ತೆಗೆದುಕೊಳ್ಳಬೇಕೆಂದು ನಾನು ಬಯಸಿದ್ದೆ. ಆದ್ರೇ, ಕೊನೆಗೂ ದೇಶದ ಒಳಿಗಾಗಿ ತೆಗೆದುಕೊಂಡ ಈ ನಿರ್ಧಾರಕ್ಕೆ ಮೆಚ್ಚಬೇಕು. ಇದಾದ ಬಳಿಕ ಮೌಲಾನಾ ಮಸೂದ್‌ ಅಜರ್‌ ಮತ್ತು ಹಫೀಸ್‌ ಸಯೀದ್‌ನ ಕೂಡ ಇದೇ ರೀತಿ ಕೇಂದ್ರ ಸರ್ಕಾರ ಮಟ್ಟ ಹಾಕುತ್ತೆ ಅನ್ನೋ ವಿಶ್ವಾಸ ನನ್ನದಾಗಿದೆ ಅಂತ ಒವೈಸಿ ಹೇಳಿದ್ದಾರೆ.

ABOUT THE AUTHOR

...view details