ಕರ್ನಾಟಕ

karnataka

ಆರ್ಟಿಕಲ್​​​​ 370 ರದ್ದು: ಮೋದಿ - ಶಾಗೆ ಅಭಿನಂದನೆ ಸಲ್ಲಿಸಿ ಅಡ್ವಾಣಿ ಹೇಳಿದ್ರು ಈ ಮಾತು!

By

Published : Aug 5, 2019, 4:38 PM IST

Updated : Aug 5, 2019, 4:45 PM IST

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಕಲ್ಪಿಸಿದ್ದ ಆರ್ಟಿಕಲ್​ 370 ರದ್ದು ಆಗಿದ್ದು, ಮೋದಿ-ಶಾಗೆ ಬಿಜೆಪಿ ಹಿರಿಯ ಮುಖಂಡ ಎಲ್​ಕೆ ಅಡ್ವಾಣಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

ಎಲ್​ಕೆ ಅಡ್ವಾಣಿ/ LK adavani

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​ 370 ರದ್ದುಗೊಂಡಿದ್ದು, ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರಕ್ಕೆ ಮಹತ್ವದ ಗೆಲುವು ಸಿಕ್ಕಿದೆ. ಇದಕ್ಕೆ ಬಿಜೆಪಿ ಬೀಷ್ಮ ಎಲ್​ ಕೆ ಅಡ್ವಾಣಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಎನ್​ಡಿಎ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿ ಹಿರಿಯ ನಾಯಕ ಲಾಲ್​ ಕೃಷ್ಣ ಅಡ್ವಾಣಿ ಸಂತಸ ವ್ಯಕ್ತಪಡಿಸಿದ್ದು, ಜನಸಂಘದ ಕನಸು ಸಾಕಾರಗೊಂಡಿದೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಸುಭದ್ರ ದೇಶ ಕಟ್ಟಲು ಕೇಂದ್ರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಹಿಂದಿನಿಂದಲೂ ಅರ್ಟಿಕಲ್​ 370 ರದ್ದು ಮಾಡುವುದು ಬಿಜೆಪಿ ಮಹತ್ವದ ನಿರ್ಧಾರಗಳಲ್ಲಿ ಒಂದಾಗಿತ್ತು. ಇದೀಗ ಅದು ಸಾಕಾರಗೊಂಡಿದೆ ಎಂದಿದ್ದಾರೆ. ಬರುವ ದಿನಗಳಲ್ಲಿ ಖಂಡಿತವಾಗಿ ಜಮ್ಮು- ಕಾಶ್ಮೀರ ಹಾಗೂ ಲಡಾಕ್​​ನಲ್ಲಿ ಶಾಂತಿ ಸಮೃದ್ಧಿ ನೆಲೆಸಿ ಅಭಿವೃದ್ಧಿ ಕಾಣಲಿ ಎಂದಿದ್ದಾರೆ.

ರಾಜ್ಯಸಭೆಯಲ್ಲಿ ಆರ್ಟಿಕಲ್​ 370 ರದ್ದು ಮಾಡಿ ಅಮಿತ್​ ಶಾ ಹೇಳಿಕೆ ನೀಡುತ್ತಿದ್ದಂತೆ ಕೆಲವೊಂದು ಪಕ್ಷಗಳು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ರೆ, ಕೆಲ ಪಕ್ಷಗಳು ಕೇಂದ್ರದ ನಿರ್ಧಾರವನ್ನ ಸ್ವಾಗತಿಸಿವೆ. ಇನ್ನು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ್​ ಮುಫ್ತಿ ಕೇಂದ್ರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಭಾರತದ ಇತಿಹಾಸದಲ್ಲೇ ಇಂದು ಕರಾಳ ದಿನ ಎಂದಿದ್ದಾರೆ.

Last Updated : Aug 5, 2019, 4:45 PM IST

ABOUT THE AUTHOR

...view details