ಕರ್ನಾಟಕ

karnataka

ETV Bharat / bharat

ಗಡಿಯಲ್ಲಿ ಯಾರೇ ತೊಂದರೆ ಕೊಟ್ಟರೂ ಅವರನ್ನು ಉಳಿಸುವುದಿಲ್ಲ : ರಾಜನಾಥ್ ಸಿಂಗ್ ಎಚ್ಚರಿಕೆ - ಪಾಕಿಸ್ತಾನದ ಬಗ್ಗೆ ರಾಜನಾಥ್ ಸಿಂಗ್ ಹೇಳಿಕೆ

ದೇಶದ ಸೈನಿಕರು ಈ ಕಡೆ ಮಾತ್ರವಲ್ಲ, ಅಗತ್ಯವಿದ್ದರೆ ಇನ್ನೊಂದು ಬದಿಗೆ ಹೋಗಿ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ಮಾಡಬಹುದು..

Rajnath warns trouble makers
ರಾಜನಾಥ್ ಸಿಂಗ್

By

Published : Dec 30, 2020, 9:30 AM IST

ನವದೆಹಲಿ :ಅಗತ್ಯವಿದ್ದಲ್ಲಿ ಗಡಿಯುದ್ದಕ್ಕೂ ಭಯೋತ್ಪಾದಕ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಭಾರತಕ್ಕೆ ಇದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಪಾಕಿಸ್ತಾನವು ಕೆಲವು ತಿಂಗಳುಗಳಲ್ಲಿ 300-400 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಆದರೆ, ಭಾರತೀಯ ಸೇನೆಯು ಸೂಕ್ತ ಉತ್ತರವನ್ನು ನೀಡುತ್ತಿರುತ್ತದೆ ಎಂದಿದ್ದಾರೆ. "ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಸೈನ್ಯವು ಕಾರ್ಯನಿರ್ವಹಿಸುತ್ತಿದೆ. ದೇಶದ ಸೈನಿಕರು ಈ ಕಡೆ ಮಾತ್ರವಲ್ಲ, ಅಗತ್ಯವಿದ್ದರೆ ಇನ್ನೊಂದು ಬದಿಗೆ ಹೋಗಿ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ಮಾಡಬಹುದು.

ರಾಜನಾಥ್ ಸಿಂಗ್ ಎಚ್ಚರಿಕೆ

ಉರಿ ಭಯೋತ್ಪಾದಕ ದಾಳಿಯ ನಂತರ ಭಾರತವು 2016ರಲ್ಲಿ ಗಡಿಯುದ್ದಕ್ಕೂ ಭಯೋತ್ಪಾದಕ ಲಾಂಚ್ ಪ್ಯಾಡ್‌ಗಳ ಮೇಲೆ ಶಸ್ತ್ರಸಜ್ಜಿತ ದಾಳಿ ನಡೆಸುತ್ತಿದೆ. ಭಾರತ 2019ರಲ್ಲಿ ಬಾಲಕೋಟ್‌ನಲ್ಲಿ ಭಯೋತ್ಪಾದಕ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತ್ತು ಎಂದು ಉಲ್ಲೇಖಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಹೈದರಾಬಾದ್‌ನ ದುಂಡಿಗಲ್‌ನಲ್ಲಿರುವ ಏರ್‌ಫೋರ್ಸ್ ಅಕಾಡೆಮಿಯಲ್ಲಿ ಮಾತನಾಡಿದ್ದ ರಕ್ಷಣಾ ಸಚಿವರು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಾಲ್ಕು ಯುದ್ಧಗಳಲ್ಲಿ ಸೋಲು ಕಂಡ ನಂತರವೂ ನೆರೆಯ ದೇಶ ಗಡಿಯಲ್ಲಿ ತನ್ನ "ದುಷ್ಕೃತ್ಯಗಳನ್ನು" ಮುಂದುವರಿಸಿದೆ ಎಂದು ಹೇಳಿದರು.

ABOUT THE AUTHOR

...view details