ಕರ್ನಾಟಕ

karnataka

ETV Bharat / bharat

ಮಡದಿಯೊಂದಿಗೆ ಜಗಳ... ನಾಲಿಗೆ ಕಟ್​ ಮಾಡಿ ತಾಯಿ ಕೈಗೆ ಕೊಟ್ಟ ಮಗ! - ನಾಗರ್​ಕರ್ನೂಲ್​ ಸುದ್ದಿ

ಮಡದಿಯೊಂದಿಗೆ ರಾತ್ರಿಯೆಲ್ಲ ಜಗಳವಾಡಿ ಬೆಳಗ್ಗೆ ತನ್ನ ನಾಲಿಗೆಯನ್ನು ಕಟ್​ ಮಾಡಿ ತಾಯಿ ಕೈಗೆ ಕೊಟ್ಟಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

ನಾಲಿಗೆ ಕಟ್​ ಮಾಡಿ ತಾಯಿ ಕೈಗೆ ಕೊಟ್ಟ ಮಗ

By

Published : Aug 23, 2019, 5:37 AM IST

Updated : Aug 23, 2019, 7:08 AM IST

ನಾಗರ್​ ಕರ್ನೂಲ್​: ಗಂಡ-ಹೆಂಡತಿ ಇಡೀ ರಾತ್ರಿ ಕಿತ್ತಾಡಿಕೊಂಡಿದ್ದಾರೆ. ಬೆಳಗ್ಗೆ ಗಂಡನಿಗೆ ಏನಾಯ್ತೋ ಏನೋ ಗೊತ್ತಿಲ್ಲ. ಕೂಡಲೇ ತನ್ನ ನಾಲಿಗೆಯನ್ನು ಕಟ್​ ಮಾಡಿ ತಾಯಿಯ ಕೈಗೆ ಕೊಟ್ಟಿದ್ದಾನೆ. ಈ ಘಟನೆ ನಾಗರ್​ ಕರ್ನೂಲ್​ ಜಿಲ್ಲೆಯ ಸಾರ್ಲಪಲ್ಲಿ ಗ್ರಾಮದಲ್ಲಿ ನಡೆದಿದ್ದು, ಜನ ಶಾಖ್​ ಆಗಿದ್ದಾರೆ.

ಸಾರ್ಲಪಲ್ಲಿ ಗ್ರಾಮದ ನಿವಾಸಿ ಚಂದ್ರಯ್ಯ ತನ್ನ ಹೆಂಡ್ತಿ ಜೊತೆ ಮಂಗಳವಾರ ರಾತ್ರಿ ಜಗಳವಾಡಿದ್ದಾನೆ. ರಾತ್ರಿಯೆಲ್ಲ ಜಗಳವಾಡಿದ ಚಂದ್ರಯ್ಯ ಕೋಪದಲ್ಲೆ ಕಾಲ ಕಳೆದಿದ್ದಾನೆ. ಬೆಳಗ್ಗೆ ಚಂದ್ರಯ್ಯ ತನ್ನ ನಾಲಿಗೆಯನ್ನು ಕಟ್​ ಮಾಡಿಕೊಂಡಿದ್ದಾನೆ.

ಬಾಯಲ್ಲಿ ರಕ್ತ ನೋಡಿದ ತಾಯಿ ಮಗನನ್ನು ವಿಚಾರಿಸಿದ್ದಾರೆ. ಕೋಪಗೊಂಡ ಚಂದ್ರಯ್ಯ ತಾಯಿಯ ಕೈಗೆ ತುಂಡಾದ ನಾಲಿಗೆಯನ್ನು ಕೊಟ್ಟಿದ್ದಾನೆ. ಕೂಡಲೇ ತಾಯಿ ಸ್ಥಳೀಯರ ನೆರವಿನಿಂದ ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಹಾಬೂಬ್​ನಗರ ಆಸ್ಪತ್ರೆಗೆ ದಾಖಲಿಸಿದರು. ಅಷ್ಟೋತ್ತಿಗಾಗಲೇ ತಡವಾಗಿದ್ದು, ನಾಲಿಗೆಯನ್ನು ಮರುಜೋಡಣೆಗೆ ಅವಕಾಶವಿಲ್ಲವೆಂದು ವೈದ್ಯರು ಹೇಳಿದ್ದಾರೆ.

Last Updated : Aug 23, 2019, 7:08 AM IST

ABOUT THE AUTHOR

...view details