ಕರ್ನಾಟಕ

karnataka

ETV Bharat / bharat

ಆಂಧ್ರ ಪೊಲೀಸರಿಂದ ಕಳ್ಳರ ಬೇಟೆ... ಕರ್ನಾಟಕದ ಖದೀಮರನ್ನು ಹಿಡಿಯಲು 40 ಕಿ.ಮೀ ಚೇಸ್​... ಆದ್ರೂ.. ! - 40 ಕಿ.ಮೀ ಚೇಸ್

ಹೈದರಾಬಾದ್​: ಕರ್ನಾಟಕಕ್ಕೆ ಸೇರಿದ ಮೂವರು ಕಳ್ಳರನ್ನು ಹಿಡಿಯಲು ಆಂಧ್ರಪ್ರದೇಶ ಪೊಲೀಸರು 40 ಕಿ.ಮೀ  ಚೇಸ್​ ಮಾಡಿದ ಘಟನೆ  ಕರ್ನೂಲ್​ ಜಿಲ್ಲೆಯಲ್ಲಿ ನಡೆಯಲಿದೆ.

40 ಕಿ.ಮೀ ಚೇಸ್​...

By

Published : Feb 28, 2019, 9:01 PM IST

ಡೋನ್​ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆಗೆ ಸೇರಿದ ಅಂತಾರಾಜ್ಯ ಕಳ್ಳರು ಬೆತಂಚೆರ್ಲಗೆ ಹೋಗಿದ್ದಾರೆ. ಈ ವಿಷಯ ಕರ್ನಾಟಕ ಪೊಲೀಸರು ಕರ್ನೂಲ್​ ಪೊಲೀಸರಿಗೆ ತಿಳಿಸಿದ್ದಾರೆ. ಅವರು ಬೆತಂಚೆರ್ಲ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಪೊಲೀಸರು ಶೋಧ ಕಾರ್ಯ ಕೈಗೊಂಡಾಗ ಕಳ್ಳರು ಬೆತಂಚೆರ್ಲ-ಡೋನ್​ ಹೈವೇ ಮೂಲಕ ಪರಾರಿಯಾಗಿದ್ದಾರೆ.

40 ಕಿ.ಮೀ ಚೇಸ್​...

ಇನ್ನು ಬೆತಂಚೆರ್ಲ ಪೊಲೀಸರು ಡೋನ್​ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಅಲ್ಲಿಂದಲೂ ಕಳ್ಳರು ತಪ್ಪಿಸಿಕೊಂಡಿದ್ದಾರೆ. ಬಳಿಕ ಡೋನ್​ ಪೊಲೀಸರು ಕೋಟ್ಲವಾರಿಪಲ್ಲೆ ಪೊಲೀಸ್​ ಠಾಣೆಯ ಎಸ್​ಐಗೆ ನರೇಂದ್ರಕುಮಾರ್​ ರೆಡ್ಡಿಗೆ ಮಾಹಿತಿ ಮುಟ್ಟಿಸಿದ್ದಾರೆ. ಆದ್ರೆ ಅವರಿಗೂ ಚಳ್ಳೆಹಣ್ಣು ತಿನಿಸಿ ಎಸ್ಕೇಪ್​ ಆಗಿದ್ದಾರೆ.

ಈ ಸುದ್ದಿಯನ್ನು ವ್ಯಾಪಿಲಿ ಪೊಲೀಸರಿಗೆ ಮುಟ್ಟಿಸಲಾಗಿತ್ತು. ಎಸ್​ಐ ಮಾರುತಿ ಶಂಕರ್​ ಹೈವೇಯಲ್ಲಿ ತನಿಖೆ ಕೈಗೊಂಡಿದ್ದರು. ಈ ವೇಳೆ, ಕಳ್ಳರು ತಪ್ಪಿಸಿಕೊಳ್ಳಲು ಭರದಲ್ಲಿ ಡಿವೈಡರ್​ಗೆ ಕಾರನ್ನು ಡಿಕ್ಕಿ ಹೊಡೆಸಿದ್ದಾರೆ. ಇನ್ನು ಕಳ್ಳರು ಕಾರಿನಿಂದ ತಪ್ಪಿಸಿಕೊಳ್ಳಲು ಮುಂದಾದಾಗ ಎಸ್​ಐ ಮಾರುತಿ ಗುಂಡು ಹಾರಿಸಿದ್ದಾರೆ. ಆದ್ರೆ ಬಾಷಾ ಎಂಬ ಕಳ್ಳ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದು, ಇನ್ನಿಬ್ಬರಾದ ರಾಕೇಶ್​, ಲೋಕೇಶ್​ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. 40 ಕಿ.ಮೀ ಚೇಸಿಂಗ್​ನಲ್ಲಿ ಪೊಲೀಸರು ಒಬ್ಬ ಆರೋಪಿಯನ್ನು ಹಿಡಿದಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

ABOUT THE AUTHOR

...view details