ಹೈದರಾಬಾದ್: ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ವಿಚಾರಣೆಗಾಗಿ ಕೋರ್ಟ್ಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಲು ಹೈದರಾಬಾದ್ನ ವಿಶೇಷ ಸಿಬಿಐ ಕೋರ್ಟ್ ನಿರಾಕರಿಸಿದೆ.
ಜಗನ್ ಸಿಎಂ ಆಗಿರುವ ಕಾರಣ ಹಾಗೂ ಇತರ ಕಾರಣಗಳಿಂದ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ವಿನಾಯಿತಿ ನೀಡುವಂತೆ ಕೋರ್ಟ್ಗೆ ಜಗನ್ ಪರ ವಕೀಲರು ಮನವಿ ಮಾಡಿದ್ದರು. ಇದಕ್ಕೆ ಸಿಬಿಐ ನ್ಯಾಯಾಲಯ ಪ್ರಬಲ ಆಕ್ಷೇಪ ವ್ಯಕ್ತಪಡಿಸಿತು. ಸಿಬಿಐ ಆಕ್ಷೇಪಕ್ಕೆ ಮನ್ನಣೆ ನೀಡಿದ ಕೋರ್ಟ್ ಹಾಜರಾತಿಯಿಂದ ವಿನಾಯಿತಿ ನೀಡಲು ನಿರಾಕರಿಸಿತು.