ಕೊಟ್ಟಾಯಂ(ಕೇರಳ):ಕೊಟ್ಟಾಯಂ ಜಿಲ್ಲೆಯ ಮುಂಡಕಾಯಂನಲ್ಲಿ 80 ವರ್ಷದ ವೃದ್ಧ ಹಸಿವು, ದಣಿವೆಯಿಂದ ಸಾವನ್ನಪ್ಪಿದ್ದಾನೆ. ಆತನನ್ನು ಅವನ ಮಗನೇ ಕೋಣೆಯೊಂದರಲ್ಲಿ ಕೂಡಿ ಬೀಗ ಜಡಿದಿದ್ದ ಎಂದು ತಿಳಿದು ಬಂದಿದೆ.
ಕೇರಳದಲ್ಲಿ ಪೋಡಿಯನ್ ಎಂಬ ವೃದ್ಧ ಹಾಗೂ ಅವನ ಹೆಂಡತಿಯನ್ನು ಅವರ ಸ್ವಂತ ಮಗನೇ ರೂಮಿನಲ್ಲಿ ಕೂಡಿಹಾಕಿದ್ದ. ಅಲ್ಲದೇ ಯಾರೂ ಕೂಡ ಅವರ ಸಹಾಯಕ್ಕೆ ಬರಬಾರದು ಎಂಬ ಕಾರಣಕ್ಕೆ ಅವರನ್ನು ಕೂಡಿ ಹಾಕಿದ್ದ ಕೊಠಡಿಯ ಮುಂದೆ ನಾಯಿ ಕಟ್ಟಿದ್ದ ಎನ್ನಲಾಗಿದೆ.