ಕರ್ನಾಟಕ

karnataka

ETV Bharat / bharat

ಛೇ.... ನಡು ರಸ್ತೆಯಲ್ಲಿ ನವಜಾತ ಶಿಶು, ಬಾಣಂತಿ ಬಿಟ್ಟು ಹೋದ ಆ್ಯಂಬುಲೆನ್ಸ್​ ಚಾಲಕ - ಆ್ಯಂಬುಲೆನ್ಸ್​ ಡ್ರೈವರ್

ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚು ಜನರಲ್ಲಿ ಹರಡುತ್ತಿದೆ. ಇದರ ಮಧ್ಯೆ ಜನಸಾಮಾನ್ಯರು ವಿವಿಧ ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಈ ಘಟನೆ

Ambulance driver forced mom out
Ambulance driver forced mom out

By

Published : Apr 2, 2020, 7:31 PM IST

ಚೆನ್ನೈ:ಕೊರೊನಾ ವೈರಸ್​ನಿಂದ ಹೊರಬರಲು ದೇಶವನ್ನು 21 ದಿನಗಳ ಲಾಕ್​ಡೌನ್​ ಮಾಡಿ ಆದೇಶಿಸಲಾಗಿದೆ. ಈ ಮಧ್ಯೆ ಜನಸಾಮಾನ್ಯರು ಅನೇಕ ರೀತಿಯಲ್ಲಿ ತೊಂದರೆ ಅನುಭವಿಸ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಸರಿಯಾದ ವಾಹನ ಸೌಲಭ್ಯವಿಲ್ಲದೇ ಜನರ ಪಡಿಪಾಟಲು ಹೇಳತೀರದಾಗಿದೆ.

ದಿಕ್ಕುತೋಚದೆ ರಸ್ತೆಯಲ್ಲಿ ನಿಂತಿರುವ ಬಾಣಂತಿಯ ಕುಟುಂಬ

ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ರಾಜೇಶ್ವರಿ ಎಂಬ ಮಹಿಳೆಗೆ ಕಳೆದ ತಿಂಗಳು ತಾ 29ರಂದು ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಹೆರಿಗೆ ಆಗಿದೆ. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮೂರು ದಿನಗಳ ಬಳಿಕ ಡಿಸ್ಚಾರ್ಜ್ ಆಗಿ ಮನೆಗೆ ಹೋಗುವಂತೆ ವೈದ್ಯರು ತಿಳಿಸಿದ್ದಾರೆ. ಈ ವೇಳೆ, ಬೇರೆ ವಾಹನಗಳ ಸೌಲಭ್ಯವಿಲ್ಲದೇ ಆ್ಯಂಬುಲೆನ್ಸ್​ ಮಾಡಿಕೊಂಡು ಮನೆಗೆ ಹೋಗಲು ನಿರ್ಧರಿಸಿದ್ದಾರೆ.

ನಡುರೋಡಿನಲ್ಲಿ ಬಾಣಂತಿ ಹಾಗು ಸಂಬಂಧಿಕರನ್ನು ಬಿಟ್ಟು ಹೋದ ಡ್ರೈವರ್​

ಆ್ಯಂಬುಲೆನ್ಸ್​ ಜವಾದುಮಲೈ ಎಂಬ ಪ್ರದೇಶದ ಬಳಿ ಬರುತ್ತಿದ್ದಂತೆ ಯಾವುದೇ ಕಾರಣಕ್ಕೂ ಮುಂದೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಚಾಲಕ ರಸ್ತೆಯಲ್ಲೇ ಆಕೆ ಹಾಗೂ ಸಂಬಂಧಿಕರನ್ನು ಅರ್ಧ ದಾರಿಯಲ್ಲೇ ಕೆಳಗಿಳಿಸಿದ್ದಾನೆ. ಇದರಿಂದ ಬೇರೆ ದಾರಿ ಕಾಣದೇ ಬಾಣಂತಿ, ನವಜಾತು ಶಿಶು ಹಾಗೂ ಕುಟುಂಬದ ಕೆಲ ಸದಸ್ಯರು 25 ಕಿಲೋ ಮೀಟರ್​ ದೂರ ನಡೆದುಕೊಂಡೇ ಹೋಗಿ ಮನೆ ಸೇರಿದ್ದಾರೆ.

ಅಮಾನವೀಯವಾಗಿ ವರ್ತಿಸಿದ ಆ್ಯಂಬುಲೆನ್ಸ್​ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

25 ಕಿಲೋ ಮೀಟರ್ ನಡೆದು ಸಾಗುತ್ತಿರುವ ನವಜಾತ ಶಿಶು, ಬಾಣಂತಿ ಹಾಗು ಸಂಬಂಧಿಕರು ​

ABOUT THE AUTHOR

...view details