ಕರ್ನಾಟಕ

karnataka

ETV Bharat / bharat

ರಾಜೀನಾಮೆ ಪಟ್ಟು ಬಿಡದ ರಾಗಾ: ಇಂದು ಕೈ ಮುಖ್ಯಮಂತ್ರಿಗಳಿಂದ ರಾಹುಲ್​ ಭೇಟಿ - undefined

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬಾರದೆಂದೆ ಒತ್ತಾಯಿಸಲು ಪಂಚ ರಾಜ್ಯಗಳ ಕಾಂಗ್ರೆಸ್​ ಮುಖ್ಯಮಂತ್ರಿಗಳು ಇಂದು ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.

ರಾಜೀನಾಮೆ ಪಟ್ಟು ಬಿಡದ ರಾಗಾ

By

Published : Jul 1, 2019, 8:29 AM IST

ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿರುವ ರಾಹುಲ್​ ಗಾಂಧಿ ಅವರನ್ನು ಇಂದು ಐದು ರಾಜ್ಯಗಳ ಕಾಂಗ್ರೆಸ್​ ಮುಖ್ಯಮಂತ್ರಿಳು ಭೇಟಿ ಮಾಡಲಿದ್ದಾರೆ.

ರಾಹುಲ್​ ಗಾಂಧಿ ನೇತೃತ್ವದ ಕಾಂಗ್ರೆಸ್​ ಪಕ್ಷ ಸಸತ 2 ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಕಂಡಿದೆ. ಆದ್ದರಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಹುಲ್​ ಗಾಂಧಿ ನಿರ್ಧಾರ ಮಾಡಿದ್ದಾರೆ.

ರಾಹುಲ್​ ರಾಜೀನಾಮೆ ನಿರ್ಧಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಬೇಸರ ತರಿಸಿದೆ. 200ಕ್ಕೂ ಹೆಚ್ಚು ಕೈ ನಾಯಕರು ಮತ್ತು ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ತಮ್ಮ ರಾಜೀನಾಮೆ ನಿರ್ಧಾರವನ್ನ ಕೈ ಬಿಟ್ಟು ಪಕ್ಷವನ್ನ ಮುನ್ನಡೆಸಬೇಕು ಎಂದು ಒತ್ತಾಯಿಸಲು ಐದು ರಾಜ್ಯಗಳ ಕಾಂಗ್ರೆಸ್​ ಮುಖ್ಯಮಂತ್ರಿಗಳು ಇಂದು ರಾಹುಲ್​ ಗಾಂಧಿಯನ್ನ ಭೇಟಿ ಮಾಡಲಿದ್ದಾರೆ.

ಪಂಜಾಬ್​ ಮುಖ್ಯಮಂತ್ರಿ, ಕ್ಯಾಪ್ಟನ್​ ಅಮರೀಂದರ್ ಸಿಂಗ್, ಮಧ್ಯಪ್ರದೇಶ ಸಿಎಂ ಕಮಲ್​ ನಾಥ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್​, ಛತ್ತಿಸ್​ಗಢ ಸಿಎಂ ಭೂಪೇಶ್ ವಘೇಲ್ ಸೇರಿದಂತೆ ಪುದುಚೇರಿ ಸಿಎಂ ನಾರಾಯಣ ಸ್ವಾಮಿ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.

For All Latest Updates

TAGGED:

ABOUT THE AUTHOR

...view details