ಸೌಪಾಲ್(ಬಿಹಾರ):ಆಗಸ್ಟ್ 19ರಂದು ನಿಧನರಾಗಿದ್ದ ಬಿಹಾರದ ಮಾಜಿ ಸಿಎಂ ಜಗನ್ನಾಥ್ ಮಿಶ್ರಾರ ಅಂತಿಮ ಕಾರ್ಯ ಇಂದು ನಡೆದಿದೆ. ಆದರೆ ಸಕಲ ಸರ್ಕಾರಿ ಗೌರವ ಸಲ್ಲಿಕೆ ವೇಳೆ ನಡೆದ ಲೋಪವೊಂದು ಹೈಲೈಟ್ ಆಗಿತ್ತು.
ಸಕಲ ಸರ್ಕಾರಿ ಗೌರವದಂತೆ ಪೊಲೀಸ್ ಅಧಿಕಾರಿಗಳು 22 ರೈಫಲ್ಗಳ ಮೂಲಕ ಒಂದು ಸುತ್ತಿನ ಗುಂಡು ಹಾರಿಸಿ ಗೌರವ ಸಲ್ಲಿಸುವ ಸಂಪ್ರದಾಯವನ್ನು ಅನುಸರಿಸಲಾಯಿತು. ಆದರೆ 22 ರೈಫಲ್ನಿಂದಲೂ ಗುಂಡು ಹಾರಲೇ ಇಲ್ಲ. ರೈಫಲ್ ದೋಷ ಗಮನಕ್ಕೆ ಬಂದ ತಕ್ಷಣ ಪೊಲೀಸ್ ಅಧಿಕಾರಿಗಳು ರೈಫಲ್ ಪರೀಕ್ಷಿಸಿದ್ದಾರೆ. ಆದರೆ ಇದಾವುದೂ ಸಫಲವಾಗಲಿಲ್ಲ.