ಲಕ್ನೋ: (ಉತ್ತರ ಪ್ರದೇಶ):ದೇಶದಲ್ಲಿ ವಿತರಿಸಲಾಗುವ ಕೋವಿಡ್-19 ಲಸಿಕೆಗಳನ್ನು 'ಬಿಜೆಪಿಯ ಲಸಿಕೆ' ಎಂದು ಹೇಳಿ ವಿವಾದಕ್ಕೊಳಗಾಗಿದ್ದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ ಲಸಿಕೆ ವಿಚಾರವಾಗಿ ನಾನು ಪ್ರಶ್ನೆ ಮಾಡಿರುವುದು ಬಿಜೆಪಿಗೆ ಹೊರತು ವಿಜ್ಞಾನಿಗಳಿಗಲ್ಲ ಎಂದು ಹೇಳಿಕೆ ನೀಡಿರುವ ಅಖಿಲೇಶ್ ಯಾದವ್, ನಾನು ಅಥವಾ ಸಮಾಜವಾದಿ ಪಕ್ಷವೂ ಲಸಿಕೆ ತಯಾರಿಕೆ ಮಾಡಿರುವ ವಿಜ್ಞಾನಿಗಳು, ತಜ್ಞರು ಹಾಗೂ ಸಂಶೋಧಕರನ್ನ ಪ್ರಶ್ನೆ ಮಾಡಿಲ್ಲ. ಬದಲಾಗಿ ಬಿಜೆಪಿಯನ್ನ ಪ್ರಶ್ನೆ ಮಾಡಿದ್ದೇವೆ. ನಮ್ಮಲ್ಲಿರುವ ಕೆಲವೊಂದು ಅನುಮಾನಗಳಿಗೆ ಸ್ಪಷ್ಟನೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಓದಿ: ಇದು ಬಿಜೆಪಿ ಲಸಿಕೆ, ನಾನು ತೆಗೆದುಕೊಳ್ಳುವುದಿಲ್ಲ: ಅಖಿಲೇಶ್ ಯಾದವ್