ಚೆನ್ನೈ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸಿಎಂ ಕೆ.ಪಳನಿಸ್ವಾಮಿ ಅವರನ್ನು ನಾಮನಿರ್ದೇಶನ ಮಾಡಲು ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆಯ ಜನರಲ್ ಕೌನ್ಸಿಲ್ ಇಂದು ಅನುಮೋದನೆ ನೀಡಿದೆ. ಚೆನ್ನೈನಲ್ಲಿ ಇಂದು ನಡೆದ ಸಭೆಯಲ್ಲಿ ಕೌನ್ಸಿಲ್ ಈ ನಿರ್ಣಯ ಅಂಗೀಕರಿಸಿದೆ.
ಮಿತ್ರಪಕ್ಷಗಳನ್ನು ಅಂತಿಮಗೊಳಿಸಲು, ಅವರೊಂದಿಗೆ ಸೀಟು ಹಂಚಿಕೆ ಒಪ್ಪಂದ ಮತ್ತು ಅಧಿಕಾರ ಉಳಿಸಿಕೊಳ್ಳಲು ಮತದಾನ ತಂತ್ರ ರೂಪಿಸಲು ಉಪ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಅವರಿಗೆ ಕೌನ್ಸಿಲ್ ಸೂಚಿಸಿದೆ. ಎಐಎಡಿಎಂಕೆ ತಮಿಳುನಾಡಿನ ಮೈತ್ರಿಕೂಟ ಮುನ್ನಡೆಸುವ ಪಕ್ಷವಾಗಿದೆ. ಹೀಗಾಗಿ ಈ ನಿರ್ಣಯವನ್ನು ಒಪ್ಪುವವರು ಪಕ್ಷದಲ್ಲಿ ಉಳಿಯಬಹುದು ಮತ್ತು ಒಪ್ಪದವರು ಹೊರ ಹೋಗಬಹುದು ಎಂದು ಹೇಳಲಾಗಿದೆ.