ಕರ್ನಾಟಕ

karnataka

By

Published : Dec 11, 2019, 6:20 AM IST

Updated : Dec 11, 2019, 7:04 AM IST

ETV Bharat / bharat

ಚಲಿಸುತ್ತಿದ್ದ ಬಸ್​ನಲ್ಲೇ ಯುವತಿಗೆ ತಾಳಿ ಕಟ್ಟಲು ಮುಂದಾದ ಯುವಕ!

ವೆಲ್ಲೂರಿನ ಅಂಬೂರ್ ಬಳಿಯ ಸ್ಯಾಂಡ್ರರ್ ಕುಪ್ಪಂನ ಜಗನ್​ ಎಂಬಾತ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಆದರೆ, ಆಕೆ ಈತನನ್ನು ಪ್ರೀತಿ ಮಾಡುತ್ತಿರಲಿಲ್ಲ.

ತಾಳಿ ಕಟ್ಟಲು ಮುಂದಾದ ಯುವಕ,   A young man attempt to tie Mangalya in a running bus
ತಾಳಿ ಕಟ್ಟಲು ಮುಂದಾದ ಯುವಕ

ಚೆನ್ನೈ: ಯುವಕನೋರ್ವ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಚಲಿಸುತ್ತಿದ್ದ ಬಸ್​ನಲ್ಲೇ ತಾಳಿ ಕಟ್ಟಲು ಯತ್ನಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ವೆಲ್ಲೂರಿನ ಅಂಬೂರ್ ಬಳಿಯ ಸ್ಯಾಂಡ್ರರ್ ಕುಪ್ಪಂನ ಜಗನ್​ ಎಂಬಾತ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಆದರೆ, ಆಕೆ ಈತನನ್ನು ಪ್ರೀತಿ ಮಾಡುತ್ತಿರಲಿಲ್ಲ. ಇತ್ತೀಚೆಗಷ್ಟೇ ಯುವತಿಗೆ ಬೇರೆ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಕೂಡ ಆಗಿತ್ತು. ಆದರೂ ಈ ಯುವಕ ಯುವತಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ.

ತಾಳಿ ಕಟ್ಟಲು ಮುಂದಾದ ಯುವಕ

ನಿನ್ನೆ ಬೆಳಗ್ಗೆ ಆ ಯುವತಿ ಬಸ್​ನಲ್ಲಿ ಸಂಚಾರ ಮಾಡುವಾಗ ಅದೇ ಬಸ್​ ಹತ್ತಿದ್ದ ಆತ, ಮಾಂಗಲ್ಯ ಕಟ್ಟಲು ಮುಂದಾಗಿದ್ದಾನೆ. ಆ ವೇಳೆ ಯುವತಿ ಜೋರಾಗಿ ಕೂಗಿಕೊಂಡಿದ್ದರಿಂದ ಸನಿಹದಲ್ಲಿದ್ದ ಸಹ ಪ್ರಯಾಣಿಕರು ಆ ಯುವಕನ್ನು ಹಿಡಿದು ವನಿಯಂಬಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Last Updated : Dec 11, 2019, 7:04 AM IST

ABOUT THE AUTHOR

...view details