ಕರ್ನಾಟಕ

karnataka

ETV Bharat / bharat

ಹೆತ್ತ ತಾಯಿಯನ್ನೇ ಕುಡಗೋಲಿನಿಂದ ತುಂಡರಿಸಿದ ನಿರುದ್ಯೋಗಿ ಮಗ! - ಗುಂತಕಲ್ಲು ಅಪರಾಧ ಸುದ್ದಿ

ಉದ್ಯೋಗ ಇಲ್ಲದೇ ಮನೆಯಲ್ಲಿ ಖಾಲಿ ಕುಳಿತಿದ್ದ ಮಗ ತನ್ನ ಹೆತ್ತ ತಾಯಿಯನ್ನು ಕುಡಗೋಲಿನಿಂದ ತುಂಡರಿಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಹೆತ್ತ ತಾಯಿಯನ್ನೇ ಕುಡಗೋಲಿನಿಂದ ತುಂಡರಿಸಿದ ನಿರುದ್ಯೋಗಿ ಮಗ

By

Published : Sep 28, 2019, 5:16 PM IST

ಅನಂತಪುರಂ:ಮಗನ ಕ್ಷಣಿಕ ಆವೇಶಕ್ಕೆ ತಾಯಿಯೊಬ್ಬಳು ಬಲಿಯಾಗಿರುವ ಘಟನೆ ಅನಂತಪುರಂ ಜಿಲ್ಲೆಯ ಗುಂತಕಲ್ಲಿನ ತಿಲಕ್​ ನಗರದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಸಂಜಮ್ಮ (65)ರಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆಕೆಯ ಗಂಡ ನರಸಿಂಹಲು ರೈಲ್ವೆ ಇಲಾಖೆ ಉದ್ಯೋಗಿಯಾಗಿದ್ದರು. ಅನಾರೋಗ್ಯದಿಂದ ಮೃತಪಟ್ಟಿದ್ದರು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಆ ಉದ್ಯೋಗ ಸಂಜಮ್ಮರ ಹಿರಿಯ ಮಗ ವೀರೂಪಾಕ್ಷಿಗೆ ಬಂದಿದೆ. ಆ ಸಮಯದಲ್ಲಿ ಕಿರಿಯ ಮಗ ಶ್ರೀನಿವಾಸ್​ ಕರ್ನಾಟಕದ ಬಳ್ಳಾರಿಯ ಜಿಂದಾಲ್​ ಸ್ಟೀಲ್​ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ.

ಶ್ರೀನಿವಾಸ್​ ಹತ್ತು ತಿಂಗಳ ಹಿಂದೆ ಜಿಂದಾಲ್​ ಫ್ಯಾಕ್ಟರಿಯಲ್ಲಿನ ಉದ್ಯೋಗ ತೊರೆದು ಮನೆಯಲ್ಲೇ ಕಾಲ ಕಳೆಯುತ್ತಿದ್ದನಂತೆ. ಈ ವಿಷಯಕ್ಕಾಗಿ ತಾಯಿ-ಮಗನ ಮಧ್ಯೆ ವಾಗ್ವಾದ ನಡೆದಿದೆ. ಕೋಪಗೊಂಡ ಶ್ರೀನಿವಾಸ್​ ಕುಡಗೋಲಿನಿಂದ ಹೆತ್ತ ತಾಯಿಯನ್ನ 18 ಬಾರಿ ಕೊಚ್ಚಿ ತುಂಡರಿಸಿದ್ದಾನೆ. ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ ಶ್ರೀನಿವಾಸ್​ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಘಟನೆ ಕುರಿತು ಗುಂತಕಲ್ಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details