ಕರ್ನಾಟಕ

karnataka

ETV Bharat / bharat

6 ತಿಂಗಳು, 100 ವಿಜ್ಞಾನಿಗಳ ಶ್ರಮ... 3 ನಿಮಿಷಗಳಲ್ಲಿ ಕಕ್ಷೆಗೇರಿದ ಎ-ಸ್ಯಾಟ್

ಎ-ಸ್ಯಾಟ್ ನಿರ್ಮಾಣದ ಕುರಿತಾಗಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಜಿ. ಸತೀಶ್​ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ.

By

Published : Mar 28, 2019, 10:59 AM IST

ಎ-ಸ್ಯಾಟ್​ ಕುರಿತು ಡಿಆರ್​ಡಿಒ ಮುಖ್ಯಸ್ಥ ಜಿ. ಸತೀಶ್​ ರೆಡ್ಡಿ ಮಾತು

ನವದೆಹಲಿ: ಎ-ಸ್ಯಾಟ್​ ಅಥವಾ ಆ್ಯಂಟಿ ಸ್ಯಾಟಲೈಟ್​ ಮಿಸೈಲ್​ ಅನ್ನು ಯಶಸ್ವಿಯಾಗಿ ಪ್ರಯೋಗಿಸುವ ಮೂಲಕ ಭಾರತ ವಿಶ್ವದ ಗಮನ ಸೆಳೆದಿದೆ.

ಈ ಮಹತ್ವದ ಯೋಜನೆ 2 ವರ್ಷಗಳಿಂದ ಅಭಿವೃದ್ಧಿ ಹಂತದಲ್ಲಿದ್ದರೂ, ವ್ಯವಸ್ಥಿತ ರೂಪ ಸಿಕ್ಕಿದ್ದು 6 ತಿಂಗಳಿಂದ ಎಂದು ಡಿಆರ್​ಡಿಒ (ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ) ಮುಖ್ಯಸ್ಥ ಜಿ. ಸತೀಶ್​ ರೆಡ್ಡಿ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ಗೆ ಈ ಪ್ರಯೋಗದ ಬಗ್ಗೆ ನಿರಂತರ ವರದಿ ಮಾಡುತ್ತಿದ್ದೆವು. ಪ್ರಧಾನಿ ಮೋದಿ ಅವರ ಅನುಮತಿ ಮೇರೆಗೆ ದೋವಲ್ ನಮಗೆ ಅಗತ್ಯ ಸಲಹೆ ನೀಡುತ್ತಿದ್ದರು. ಯೋಜನೆಯ ಅಭಿವೃದ್ಧಿ ಕಾರ್ಯಗಳು ಹಲವು ವರ್ಷಗಳಿಂದ ನಡೆಯುತ್ತಿದ್ದರೂ, ಕಳೆದ ಆರು ತಿಂಗಳಿಂದ ವ್ಯವಸ್ಥಿತ ರೂಪ ಪಡೆದುಕೊಂಡಿತು ಎಂದಿದ್ದಾರೆ ಸತೀಶ್​ ರೆಡ್ಡಿ.

ಎ-ಸ್ಯಾಟ್​ ಕುರಿತು ಡಿಆರ್​ಡಿಒ ಮುಖ್ಯಸ್ಥ ಜಿ. ಸತೀಶ್​ ರೆಡ್ಡಿ ಮಾತು

ಟಾರ್ಗೆಟ್​ನಂತೆ ಉಡ್ಡಯನ ಮಾಡಲು ಆರು ತಿಂಗಳ ಕಾಲ 100 ವಿಜ್ಞಾನಿಗಳು ಅವಿರತ ಶ್ರಮಿಸಿದರು. ಇದರ ಫಲವಾಗಿ ಮೂರು ನಿಮಿಷಗಳಲ್ಲಿ ಜೀವಂತ ಸ್ಯಾಟಲೈಟ್​ ಅನ್ನು ಬಾಹ್ಯಾಕಾಶದ 300 ಕಿ.ಮೀ ದೂರಕ್ಕೆ ಉಡ್ಡಯನ ಮಾಡಲು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳಿದರು.

ಬಾಹ್ಯಾಕಾಶದ ಸಂಪನ್ಮೂಲಗಳಿಗೆ ಹಾನಿಯಾಗಬಾರದೆಂದು 300 ಕಿ.ಮೀ ದೂರಕ್ಕೆ ಹಾರಿಸುವ ಟಾರ್ಗೆಟ್​ ಇಟ್ಟುಕೊಂಡೆವು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಇದು ‘Low Earth Orbit’ ಸ್ಯಾಟಲೈಟ್​ಗಳನ್ನು ಮಾತ್ರ ಟಾರ್ಗೆಟ್​ ಮಾಡಲಿದ್ದು, 1000 ಕಿ.ಮೀವರೆಗೆ ಮಾತ್ರ ತನ್ನ ವ್ಯಾಪ್ತಿ ಹೊಂದಿದೆ ಎಂದು ವಿವರಿಸಿದರು.

ನಿನ್ನೆ ಒಡಿಶಾದ ಬಾಲಸೋರ್​ನಿಂದ ಬೆಳಗ್ಗೆ 11:16ಕ್ಕೆ ಎ-ಸ್ಯಾಟ್ ಕ್ಷಿಪಣಿ ಉಡಾವಣೆ ಮಾಡಲಾಯಿತು. ಮೂರೇ ನಿಮಿಷಗಳಲ್ಲಿ ಕ್ಷಿಪಣಿ ನಿಗದಿತ ಸ್ಥಳ ತಲುಪಿತ್ತು. ಭೂಮಿಯ ಮೇಲ್ಮೈನಿಂದ 300 ಕಿ.ಮೀ ದೂರದಲ್ಲಿ ಕ್ಷಿಪಣಿ ಕಾರ್ಯಾಚರಣೆ ನಡೆಸಲಿದೆ. ಈ ತಂತ್ರ ಜ್ಞಾನದಲ್ಲಿ ಭಾರತ ಸಹ ಅಮೆರಿಕ, ರಷ್ಯಾ ಹಾಗೂ ಚೀನಾದ ಸಾಲಿಗೆ ಸೇರಿದೆ.

ದೇಶದ ಸಂವಹನ ಜಾಲಕ್ಕೆ ತೊಂದರೆಯೊಡ್ಡುವ ಶತ್ರುಗಳ ಸ್ಯಾಟಲೈಟ್​ಗಳನ್ನು ಹೊಡೆದುರುಳಿಸುವ ಕಾರ್ಯ ಈ ಕ್ಷಿಪಣಿಯದ್ದಾಗಿದೆ. ‘Kinetic kill’ ಮೂಲಕ ನೇರವಾಗಿ ಸ್ಯಾಟಲೈಟ್​ ಮೇಲೆ ದಾಳಿ ನಡೆಯಲಿದ್ದು, ಇದು ಸಂಪೂರ್ಣ ಭಾರತದ ಕೊಡುಗೆಯಾಗಿದೆ ಎಂದು ಡಿಆರ್​ಡಿಒ ಮುಖ್ಯಸ್ಥ ರೆಡ್ಡಿ ಮಾಹಿತಿ ನೀಡಿದರು.


ABOUT THE AUTHOR

...view details