ಕರ್ನಾಟಕ

karnataka

ಸರ್ಕಾರಿ ಬಸ್​​ನ್ನೇ ಕದ್ದ ಭೂಪ... ಆಂಧ್ರದಿಂದ ಬೆಂಗಳೂರಿಗೆ ಬರುವಾಗ ಸಿಕ್ಕಿಬಿದ್ದ ಖದೀಮ

By

Published : May 22, 2020, 7:15 PM IST

Updated : May 22, 2020, 7:22 PM IST

ಹಾಡಹಗಲೇ ಚಾಲಾಕಿ ಕಳ್ಳನೋರ್ವ ಸರ್ಕಾರಿ ಬಸ್ಸನ್ನೇ ಕದ್ದು ಚಾಲನೆ ಮಾಡಿರುವ ಘಟನೆ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಈತ ಬೆಂಗಳೂರು ನಿವಾಸಿ ಎಂದು ತಿಳಿದುಬಂದಿದೆ.

APSRTC bus Theft in Anantapuram
ಆಂಧ್ರಪ್ರದೇಶದಲ್ಲಿ ಸರ್ಖಾರಿ ಬಸ್ ಕಳ್ಳತನ

ಅನಂತಪುರ(ಆಂಧ್ರಪ್ರದೇಶ): ಅನಂತಪುರಂ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಕದ್ದು ಚಾಲನೆ ಮಾಡಿರುವ ಪ್ರಕರಣವೊಂದು ನಡೆದಿದೆ.

ಧರ್ಮಾವರಂ ಆರ್​ಟಿಸಿ ಡಿಪೋದಿಂದ ಹಾಡಹಗಲೇ ಚಾಲಾಕಿ ಕಳ್ಳನೋರ್ವ ಬಸ್​ನ್ನೇ ಕದ್ದು ಚಾಲನೆ ಮಾಡಿದ್ದಾನೆ. ಡಿಪೋದಿಂದ ಬಸ್‌ ಅತಿವೇಗವಾಗಿ ಹೋಗುತ್ತಿದ್ದುದನ್ನು ಅಲ್ಲಿನ ಸಿಬ್ಬಂದಿ ಗಮನಿಸಿ ಕೆಲಕಾಲ ಅವಾಕ್‌ ಆದರು.

ಆಂಧ್ರಪ್ರದೇಶದಲ್ಲಿ ಸರ್ಕಾರಿ ಬಸ್ ಕಳ್ಳತನ

ಧರ್ಮಾವರಂ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಚಿನ್ನಕೊತ್ತಪಲ್ಲಿ ಮಾರ್ಗವಾಗಿ ಪೆನುಗೊಂಡದತ್ತ ಹೊರಟಿದ್ದ. ಕೂಡಲೇ ಆರ್‌ಟಿಸಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವಿಷಯ ತಿಳಿದ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್‌ವೊಂದನ್ನು ರಸ್ತೆಗೆ ಅಡ್ಡ ನಿಲ್ಲಿಸಿ ಬಸ್​​ನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಬಳಿಕ ಖದೀಮನನ್ನು ಸಹ ಕಂಬಿ ಹಿಂದೆ ಕಳಿಸಿದ್ದಾರೆ.

ಬಂಧಿತನನ್ನು ಬೆಂಗಳೂರು ಮೂಲದ ಮಜಮಲ್​ ಖಾನ್​ ಎಂದು ಗುರುತಿಸಲಾಗಿದೆ. ಧರ್ಮಾವರಂ ಆರ್​ಟಿಸಿ ಡಿಪೋ ಮ್ಯಾನೇಜರ್ ನೀಡಿರುವ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ​

Last Updated : May 22, 2020, 7:22 PM IST

ABOUT THE AUTHOR

...view details