ಖಮ್ಮಂ(ತೆಲಂಗಾಣ):ಪ್ರಕರಣ ದಾಖಲಿಸುವ ನೆಪದಲ್ಲಿ ಮಧ್ಯರಾತ್ರಿ ಪೊಲೀಸ್ ಠಾಣೆಗೆ ತೆರಳಿದ ದಿವ್ಯಾಂಗ ವ್ಯಕ್ತಿಯೊಬ್ಬ ಪೇದೆಯೊಬ್ಬರ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿರುವ ಘಟನೆ ಖಮ್ಮಂ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಇಲ್ಲಿನ ನಾಯಾಬ್ರಾಹ್ಮಣ ನಗರದ ಡುಂಗ್ರೋತು ಮಸ್ತಾನ್ (ದಿವ್ಯಾಂಗ ವ್ಯಕ್ತಿ) ಮತ್ತು ಇನ್ನಿಬ್ಬರು ಸೋಮವಾರ ಮಧ್ಯರಾತ್ರಿ ಪೊಲೀಸ್ ಠಾಣೆಗೆ ತೆರಳಿದ್ದರು. ಪೇದೆ ಮನ್ಸೂರ್ ಅಲಿಗೆ ವಿವರಣೆ ನೀಡುತ್ತಿದ್ದ ಕ್ರಮದಲ್ಲಿ ಮಸ್ತಾನ್ ಆತಂಕ ಸೃಷ್ಟಿಸಿದ್ದಾನೆ.
ಏಕಾಏಕಿ ಪೊಲೀಸ್ ಪೇದೆ ಮನ್ಸೂರ್ ಅಲಿ ಮೇಲೆ ಮಸ್ತಾನ್ ಅಟ್ಯಾಕ್ ಮಾಡಿ ತೊಡೆಯನ್ನು ಕಚ್ಚಿದ್ದಾನೆ. ಬಳಿಕ ಪೇದೆಯ ಕಿರುಬೆರಳನ್ನೇ ಬಾಯಿಯಿಂದ ಕಚ್ಚಿ ಕತ್ತರಿಸಿದ! ಇದಾದ ಮೇಲೆ, ಮಸ್ತಾನ್ ಮತ್ತು ಆತನೊಂದಿಗೆ ಬಂದಿದ್ದ ಇಬ್ಬರೂ ಠಾಣೆಯಿಂದ ಕಾಲ್ಕಿತ್ತಿದ್ದರು. ಪೊಲೀಸರು ಮಸ್ತಾನ್ನನ್ನು ಬಂಧಿಸಿ ವಿಚಾರಿಸುತ್ತಿರುವಾಗ ಎಎಸ್ಐ ನಾಗೇಶ್ವರ ರಾವ್ ಮೇಲೆ ಮತ್ತೆ ದಾಳಿ ಮಾಡಿದ್ದಾನೆ.
ಮಸ್ತಾನ್ ಕೆಲ ವರ್ಷದಿಂದಲೂ ಹೀಗೆ ವ್ಯವಹರಿಸುತ್ತಾ ಪೊಲೀಸ್ ಠಾಣೆಯಲ್ಲಿ, ಹೆದ್ದಾರಿಯಲ್ಲಿ ಜಗಳವಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ರೈಲು ಹಳಿಯ ಮೇಲೆ ತಾನೇ ತನ್ನ ಎರಡು ಕಾಲುಗಳನ್ನಿಟ್ಟು ಕಳೆದುಕೊಂಡಿದ್ದಾನೆ. ರಾಜ್ಯದ ಕೆಲ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣವೂ ದಾಖಲಾಗಿವೆ.
ಪೊಲೀಸಪ್ಪನ ಕೈ ಬೆರಳು ಕಚ್ಚಿ ಕತ್ತರಿಸಿರುವ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.