ಎರ್ನಾಕುಲಂ(ಕೇರಳ): ಎಣ್ಣೆ ವಿಚಾರಕ್ಕೋಸ್ಕರ ತಂದೆ - ಮಗ ಜಗಳ ಮಾಡಿದ್ದು, ಅದು ತಾರಕ್ಕೇರಿದಾಗ ಮಗ ತಂದೆಯ ಮೇಲೆ ಬಾಟಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ.
ಮಗ ಖರೀದಿ ಮಾಡಿ ತಂದ ಎಣ್ಣೆ ಕುಡಿದ ತಂದೆ: ಆಕ್ರೋಶಗೊಂಡು ಹೆತ್ತಪ್ಪನ ಕೊಲೆ ಮಾಡಿದ ಪಾಪಿ ಮಗ! - ಕೇರಳದ ಎರ್ನಾಕುಲಂ ಕ್ರೈಂ ಸುದ್ದಿ
ಮಗ ಖರೀದಿ ಮಾಡಿ ತಂದಿದ್ದ ಮದ್ಯವನ್ನ ತಂದೆ ಸೇವನೆ ಮಾಡಿದ್ದರಿಂದ ಆಕ್ರೋಶಗೊಂಡು ಹೆತ್ತಪ್ಪನನ್ನೇ ಮಗ ಕೊಲೆ ಮಾಡಿರುವ ಘಟನೆ ನಡೆದಿದೆ.
![ಮಗ ಖರೀದಿ ಮಾಡಿ ತಂದ ಎಣ್ಣೆ ಕುಡಿದ ತಂದೆ: ಆಕ್ರೋಶಗೊಂಡು ಹೆತ್ತಪ್ಪನ ಕೊಲೆ ಮಾಡಿದ ಪಾಪಿ ಮಗ! Ernakulam](https://etvbharatimages.akamaized.net/etvbharat/prod-images/768-512-9196308-819-9196308-1602842001353.jpg)
Ernakulam
ತಂದೆಯ ಕೊಲೆಗೈದ ಪಾಪಿ ಮಗ
ಮದ್ಯದ ಬಾಟಲಿ ವಿಚಾರವಾಗಿ ತಂದೆ - ಮಗನ ನಡುವೆ ಜಗಳ ಆರಂಭಗೊಂಡಿದೆ. ಈ ವೇಳೆ, ಇಬ್ಬರ ಮೇಲೆ ಮತ್ತೊಬ್ಬರು ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಗ ವಿಷ್ಣು ಸದ್ಯ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ತಂದೆ ಭರತ್ನ ಸಾವನ್ನಪ್ಪಿದ್ದಾನೆ.
ವಿಷ್ಣು ಖರೀದಿ ಮಾಡಿದ್ದ ಮದ್ಯ ಭರತ್ ಸೇವನೆ ಮಾಡಿದ್ದರಿಂದ ಈ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಇದೇ ವಿಚಾರಕ್ಕೆ ಆಕ್ರೋಶಗೊಂಡ ಮಗ ವಿಷ್ಣು ತಂದೆಗೆ ಬಾಟಲಿಯಿಂದ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ.
Last Updated : Oct 16, 2020, 3:52 PM IST