ನವದೆಹಲಿ: ನಾಳೆ ಸಂಜೆ ವೇಳೆಗೆ ಅಂಫಾನ್ ಎಂಬ ಭೀಕರ ಚಂಡಮಾರುತ ಭಾರತವನ್ನು ಅಪ್ಪಳಿಸಲಿದ್ದು, ಇದಕ್ಕಾಗಿ ಸಾಕಷ್ಟು ಮುಂಜಾಗ್ರತೆ ಕ್ರಮ ವಹಿಸಲಾಗಿದೆ. ಭಾರತವನ್ನು ಅಪ್ಪಳಿಸಲಿರುವ ಈ ಅಂಫಾನ್ ಚಂಡಮಾರುತದ ಬಗ್ಗೆ ನಿಮಗೆ ತಿಳಿಯದ ಕೆಲವು ವಿಷಯಗಳಿವೆ.
ಸೈಕ್ಲೋನ್ಗಳಿಗೆ ಹೆಸರಿಡಲು ಕಾರಣವೇನು ಗೊತ್ತಾ?
2000 ರಲ್ಲಿ, ವಿಶ್ವ ಹವಾಮಾನ ಸಂಸ್ಥೆ , ಯುನೈಟೆಡ್ ನೇಷನ್ಸ್ ಎಕಾನಾಮಿಕ್ಸ್ ಅಂಡ್ ಸೋಷಿಯಲ್ ಕಮಿಷನ್ ಫಾರ್ ಏಷ್ಯಾ ಸಭೆ ಸೇರಿ ಸೈಕ್ಲೋನ್ಗಳಿಗೆ ಹೆಸರಿಡುವ ಪದ್ಧತಿ ಪ್ರಾರಂಭಿಸಲು ನಿರ್ಧರಿಸಲಾಯಿತು. ಪ್ರತೀ ದೇಶದಿಂದ ಬಂದ ಸೂಚನೆ ಮತ್ತು ಹೆಸರುಗಳನ್ನು ಪಟ್ಟಿಮಾಡಿ WMO ಮತ್ತು ESCAP ಪ್ಯಾನಲ್ ಯಾವುದಾದರೂ ಒಂದು ಹೆಸರನ್ನು ಅಂತಿಮಗೊಳಿಸುತ್ತದೆ.