ಕರ್ನಾಟಕ

karnataka

ETV Bharat / bharat

ಚಲಿಸುತ್ತಿದ್ದ ಬಸ್​ಗೆ ಬೆಂಕಿ: 9 ಮಂದಿ ದುರ್ಮರಣ, 25 ಜನರಿಗೆ ಗಾಯ - 9 passengers electrocuted to death

ಬಸ್​ಗೆ ವಿದ್ಯುತ್ ಪ್ರಸರಣ ತಂತಿ ತಗುಲಿದ ಪರಿಣಾಮ ಬಸ್​ಗೆ ಬೆಂಕಿ ಹತ್ತಿಕೊಂಡು 9 ಮಂದಿ ಮೃತಪಟ್ಟು, 25 ಜನರು ಗಾಯಗೊಂಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

bus caught fire in Odisha
ಚಲಿಸುತ್ತಿದ್ದ ಬಸ್​ಗೆ ಬೆಂಕಿ

By

Published : Feb 9, 2020, 7:30 PM IST

ಒಡಿಶಾ:ಚಲಿಸುತ್ತಿದ್ದ ಬಸ್​ಗೆ ವಿದ್ಯುತ್ ಪ್ರಸರಣ ತಂತಿ ತಗುಲಿದ ಪರಿಣಾಮ ಬಸ್​ಗೆ ಬೆಂಕಿ ಹತ್ತಿಕೊಂಡು 9 ಮಂದಿ ಮೃತಪಟ್ಟು, 25 ಜನರು ಗಾಯಗೊಂಡಿರುವ ಘಟನೆ ಒಡಿಶಾದ ಗಂಜಂ ಜಿಲ್ಲೆಯ ಗೋಲಂಥರ ಗ್ರಾಮದಲ್ಲಿ ನಡೆದಿದೆ.

ಬಸ್​ಗೆ ಬೆಂಕಿ ಹತ್ತಿಕೊಂಡು 9 ಮಂದಿ ದುರ್ಮರಣ

ಜಂಗಲ್ಪಾಡುನಿಂದ ಚಿಕಾರದ ಗ್ರಾಮಕ್ಕೆ ತೆರಳುತ್ತಿದ್ದ ಬಸ್, 11 ಕೆವಿ ವಿದ್ಯುತ್ ಪ್ರಸರಣ ತಂತಿಗೆ ಸಂಪರ್ಕಿಸಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್​ಗೆ ಬೆಂಕಿ ಹತ್ತಿಕೊಂಡು 9 ಮಂದಿ ದುರ್ಮರಣ

ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬಸ್​ನೊಳಗೆ ಸಿಲುಕಿದ್ದವರ ರಕ್ಷಣೆ ಮಾಡಿದ್ದಾರೆ. ಗಾಯಾಳುಗಳನ್ನು ಬೆರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ABOUT THE AUTHOR

...view details