ಕರ್ನಾಟಕ

karnataka

By

Published : Apr 5, 2020, 7:40 PM IST

ETV Bharat / bharat

ಮಲೇಷ್ಯಾಗೆ ತೆರಳಲು ಸಿದ್ಧವಾಗಿದ್ದ 8 ತಬ್ಲಿಘಿಗಳ ಬಂಧನ!

ತಬ್ಲಿಘಿ ಜಮಾತ್​​ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಸಾವಿರಾರು ಜನರಲ್ಲಿ ಕೋವಿಡ್​-19 ಪ್ರಕರಣ ಕಂಡು ಬಂದಿದ್ದು, ಈ ಸಭೆಯಲ್ಲಿ ಭಾಗಿಯಾಗಿದ್ದ 8 ಮಂದಿ ಮಲೇಷ್ಯಾಕ್ಕೆ ಪ್ರಯಾಣ ಬೆಳೆಸಲು ಯತ್ನಿಸುತ್ತಿದ್ದಾಗ ಪೊಲೀಸರ ಬಲೆಗೆ ಬಿದಿದ್ದಾರೆ.

8 caught at Delhi airport trying to flee to Malaysia
8 caught at Delhi airport trying to flee to Malaysia

ನವದೆಹಲಿ: ತಬ್ಲಿಘಿ ಜಮಾತ್​ನಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿ ಎಲ್ಲರ ಕಣ್ಣು ತಪ್ಪಿಸಿ ಮಲೇಷ್ಯಾಕ್ಕೆ ಪ್ರಯಾಣ ಬೆಳೆಸುತ್ತಿದ್ದ 8 ಮಂದಿಯ ಬಂಧನ ಮಾಡುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಲಿಂಡೋ ಏರ್​​​​​​​​ವೇಸ್​ನಲ್ಲಿ ದೆಹಲಿ - ಮುಂಬೈ ಮೂಲಕ ಕೌಲಾಲಂಪುರ ವಿಮಾನದಿಂದ ತಕ್ಷಣವೇ ಅವರನ್ನ ಕೆಳಗಿಳಿಸಿ ಕ್ವಾರಂಟೈನ್​ ಕೇಂದ್ರಕ್ಕೆ ಕಳುಹಿಸಿದೆ. ನವದೆಹಲಿಯಲ್ಲಿ ನಡೆದಿದ್ದ ತಬ್ಲಿಘಿ ಜಮಾತ್​ ಸಭೆಯಲ್ಲಿ ಭಾಗಿಯಾಗಿದ್ದ ಅನೇಕರಲ್ಲಿ ಕೋವಿಡ್​-19 ಕಾಣಿಸಿಕೊಂಡಿದ್ದು, ಈಗಾಗಲೇ ಅನೇಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ತಬ್ಲಿಘಿ ಸಭೆಯಲ್ಲಿ ಭಾಗಿಯಾಗಿ ಇಷ್ಟುದಿನ ಬೇರೆ ಬೇರೆ ಪ್ರದೇಶಗಳಲ್ಲಿ ಭಾಗಿಯಾಗಿದ್ದ ಇವರು ಇಂದು ಎಲ್ಲರೂ ಇಂದಿರಾ ಗಾಂಧಿ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ನಲ್ಲಿ ಒಟ್ಟಿಗೆ ಸೇರಿ ಪ್ರಯಾಣ ಬೆಳೆಸಲು ಮುಂದಾಗಿದ್ದರು. ಈ ವೇಳೆ, ಪೊಲೀಸರು ಅವರನ್ನ ವಶಕ್ಕೆ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ.

ABOUT THE AUTHOR

...view details