ಕರ್ನಾಟಕ

karnataka

ETV Bharat / bharat

ವಯಸ್ಸು 73: ಸಾಯಿ ದೇವಸ್ಥಾನಕ್ಕೆ 8ಲಕ್ಷ ರೂ ದೇಣಿಗೆ- ಇದು ಭಿಕ್ಷುಕನ ಭಕ್ತಿ! - ಸಾಯಿಬಾಬಾ ದೇವಸ್ಥಾನಕ್ಕೆ 8ಲಕ್ಷ ರೂ ದೇಣಿಗೆ

ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ 73 ವರ್ಷದ ವೃದ್ಧ ಸಾಯಿಬಾಬಾ ದೇವಸ್ಥಾನಕ್ಕೆ ಬರೋಬ್ಬರಿ 8 ಲಕ್ಷ ರೂ ದೇಣಿಗೆ ನೀಡಿ ತಮ್ಮ ಭಕ್ತಿ ಎಂಥಾದ್ದು ಎಂದು ತೋರಿಸಿಕೊಟ್ಟಿದ್ದಾರೆ.

73-year-old beggar donates 8 lakh
ಸಾಯಿಬಾಬಾ ದೇವಸ್ಥಾನಕ್ಕೆ 8ಲಕ್ಷ ರೂ ದೇಣಿಗೆ

By

Published : Feb 14, 2020, 1:22 PM IST

ವಿಜಯವಾಡ(ಆಂಧ್ರಪ್ರದೇಶ): ತನ್ನ 73ನೇ ಇಳಿ ವಯಸ್ಸಿನಲ್ಲೂ ವೃದ್ಧನೋರ್ವ ದೇವಸ್ಥಾನಕ್ಕೆ ಬರೋಬ್ಬರಿ 8 ಲಕ್ಷ ರೂ ದೇಣಿಗೆ ನೀಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ಕಳೆದ ಏಳು ವರ್ಷಗಳಿಂದ ಇಷ್ಟೊಂದು ಹಣ ದೇವರಿಗೆ ದೇಣಿಗೆ ರೂಪದಲ್ಲಿ ನೀಡಲಾಗಿದ್ದು, ಕಳೆದ ಹಲವು ವರ್ಷಗಳಿಂದ ಯಾದಿ ರೆಡ್ಡಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. ಈ ಹಿಂದೆ ರಿಕ್ಷಾ ಎಳೆಯುವ ಕೆಲಸ ಮಾಡುತ್ತಿದ್ದ ಇವರು, ಮೊಣಕಾಲುಗಳಲ್ಲಿ ನೋವು ಕಾಣಿಸಿಕೊಂಡು ಅದು ಸಾಧ್ಯವಾಗದೇ ಹೋದಾಗ ಭಿಕ್ಷೆ ಬೇಡಲು ನಿರ್ಧರಿಸಿದ್ದರು. ಸದ್ಯ ಕೂಡ ವಿಜಯವಾಡದ ದೇವಾಲಯಗಳ ಪ್ರವೇಶದ್ವಾರದ ಮುಂದೆ ಕುಳಿತು ಭಿಕ್ಷೆ ಬೇಡುವ ಕಾಯಕ ಮಾಡುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಯಾದಿ ರೆಡ್ಡಿ, ನಾನು 40 ವರ್ಷಗಳಿಂದ ರಿಕ್ಷಾ ಎಳೆಯಿವ ಕೆಲಸ ಮಾಡ್ತಿದೆ. ಆದರೆ ಮೊಣಕಾಲುಗಳು ತೊಂದರೆಗೆ ಒಳಗಾಗುತ್ತಿದ್ದಂತೆ, ಆರೋಗ್ಯ ಕ್ಷೀಣಿಸಲು ಪ್ರಾರಂಭಿಸಿದಾಗ ಭಿಕ್ಷೆ ಬೇಡಲು ನಿರ್ಧರಿಸಿದೆ ಎಂದಿದ್ದಾರೆ.

ನಾನು ದೇವಸ್ಥಾನಕ್ಕೆ ಹಣ ದಾನ ಮಾಡಿದ ನಂತರ ಜನರು ನನ್ನನ್ನು ಗುರುತಿಸಲು ಪ್ರಾರಂಭಿಸಿದರು. ಇದಾದ ಬಳಿಕ ನನಗೆ ಹೆಚ್ಚಿನ ರೀತಿಯಲ್ಲಿ ಜನರು ಭಿಕ್ಷೆ ನೀಡುತ್ತಿದ್ದು, ಹಣವನ್ನು ಸಾಯಿಬಾಬಾ ದೇವಸ್ಥಾನಕ್ಕೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇವರು ನೀಡಿರುವ ಹಣದಿಂದಲೇ ಗೋಶಾಲೆ ನಿರ್ಮಾಣ ಮಾಡಿದ್ದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ABOUT THE AUTHOR

...view details