ಕರ್ನಾಟಕ

karnataka

By

Published : Aug 3, 2019, 12:36 PM IST

ETV Bharat / bharat

ಭದ್ರತಾ ಪಡೆ ದಾಳಿಗೆ 7 ನಕ್ಸಲರು ಹತ: ಅಪಾರ ಶಸ್ತ್ರಾಸ್ತ್ರ ವಶ

ಜಿಲ್ಲಾ ಮೀಸಲು ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 7 ನಕ್ಸಲರು ಮೃತಪಟ್ಟಿರುವ ಘಟನೆ ಛತ್ತೀಸ್​ಗಢದ ರಾಜ್​ನಂದಗಾವ್​ನ ಸೀತಾಗೋಟ ಅರಣ್ಯ ಪ್ರದೇಶದಲ್ಲಿ ಇಂದು ನಡೆದಿದೆ.

Naxals

ಚತ್ತೀಸ್​ಗಢ: ರಾಜ್​ನಂದಗಾವ್​ನ ಸೀತಾಗೋಟ ಅರಣ್ಯ ಪ್ರದೇಶದಲ್ಲಿ ಜಿಲ್ಲಾ ಮೀಸಲು ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 7 ನಕ್ಸಲರು ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ 6 ಗಂಟೆಗೆ ಭದ್ರತಾ ಪಡೆ ನಕ್ಸಲರ ಮೇಲೆ ಗುಂಡಿನ ದಾಳಿ ನಡೆಸಿತು. ಈ ವೇಳೆ 7 ನಕ್ಸಲರು ಮೃತಪಟ್ಟಿದ್ದು, ಎಕೆ47 ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಸದ್ಯ ಕಾರ್ಯಾಚರಣೆ ಮುಂದುವರೆದಿದೆ. ಕೆಲ ದಿನಗಳಿಂದ ಭದ್ರತಾಪಡೆ ನಕ್ಸಲ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಹಲವು ನಕ್ಸಲರು ಹತರಾಗಿದ್ದಾರೆ.

ABOUT THE AUTHOR

...view details