ಕರ್ನಾಟಕ

karnataka

ETV Bharat / bharat

ಪಶ್ಚಿಮ ಬಂಗಾಳದಲ್ಲೂ ಪಕ್ಷಾಂತರ ಪರ್ವ: ಟಿಎಂಸಿ, 'ಕೈ' ತೊರೆದು ಕಮಲ ಮುಡಿದ ಪ್ರಮುಖರು!

ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಕಾಂಗ್ರೆಸ್​ ಹಾಗೂ ಓರ್ವ ತೃಣಮೂಲ ಕಾಂಗ್ರೆಸ್​ ಮುಖಂಡ ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿದ್ದಾರೆ.

By

Published : Mar 11, 2019, 11:20 PM IST

ಬಿಜೆಪಿ ಸೇರಿದ ಮುಖಂಡರು

ಕೋಲ್ಕತ್ತಾ: ಗುಜರಾತ್​​ನಲ್ಲಿ ಕಳೆದ ಒಂದು ವಾರದಲ್ಲಿ ಆರು ಶಾಸಕರು ಕಾಂಗ್ರೆಸ್​ ತೊರೆದು ಕಮಲ ಮುಡಿದಿದ್ದು, ಅದೇ ರೀತಿ ಪಶ್ಚಿಮ ಬಂಗಾಳದಲ್ಲೂ ಪಕ್ಷಾಂತರ ಪರ್ವ ಆರಂಭಗೊಂಡಿದೆ.

ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಕಾಂಗ್ರೆಸ್​ ಹಾಗೂ ಓರ್ವ ತೃಣಮೂಲ ಕಾಂಗ್ರೆಸ್​ ಮುಖಂಡ ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್​​ನ ಹಿರಿಯ ಮುಖಂಡ ಡಾ. ಗೌತಮ್ ಘೋಷ್​ ಹಾಗೂ ಎಐಸಿಸಿ ಕಮಿಟಿ ಸದಸ್ಯ ಹಾಗೂ ಕೋಲ್ಕತ್ತಾ ಕಾಂಗ್ರೆಸ್​ ಕಮಿಟಿಯ ಸೆಕ್ರೆಟರಿ ರಾಕೇಶ್​ ಕುಮಾರ್​ ಸಿಂಗ್​ ಬಿಜೆಪಿ ಸೇರಿಕೊಂಡಿದ್ದಾರೆ. ಇತ್ತ ಟಿಎಂಸಿಯ ಮುಖಂಡ ದೇವಜನಿ ದಾಸ್​ಗುಪ್ತಾ ಕೂಡ ಕಮಲ ಮುಡಿದಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ಮುಕುಲ್​ ರಾಯ್​, ರಾಜ್ಯದ ಕಾಂಗ್ರೆಸ್​ ಹಾಗೂ ಟಿಎಂಸಿ ಪಕ್ಷದ ಅನೇಕ ಎಂಪಿ, ಎಂಎಲ್​ಎಗಳು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದಿದ್ದಾರೆ. ಇದೇ ವೇಳೆ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಅವರ ಪಕ್ಷದಿಂದ ನಮ್ಮ ಪಕ್ಷಕ್ಕೆ ಬರುತ್ತಿರುವ ಕಾರ್ಯಕರ್ತರ ವಿರುದ್ಧ ಸುಳ್ಳು ಆರೋಪ ಮಾಡಿ ದೂರು ದಾಖಲು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details