ಕರ್ನಾಟಕ

karnataka

By

Published : Jul 27, 2020, 5:00 AM IST

ETV Bharat / bharat

ಹೆಸರಿಗೆ ಚ್ಯುತಿ ತರುವವರಿಂದ ಈ ರಾಶಿಯವರು ದೂರ ಇರಬೇಕು

ಸೋಮವಾರದ ರಾಶಿಫಲ

27 July 2020 Monday Astrology
ಸೋಮವಾರದ ರಾಶಿಫಲ

ಮೇಷ

ಇಂದು ನಿಮ್ಮ ಪ್ರೀತಿಪಾತ್ರರನ್ನು ಪ್ರಭಾವಿಸಲು ಪ್ರಯತ್ನಿಸುತ್ತೀರಿ. ನೀವು ಗೊತ್ತಿಲ್ಲದ ಕಾರಣಗಳಿಗೆ ನಿಮ್ಮ ಮಿತ್ರರು ಹಾಗೂ ಬಂಧುಗಳ ಕುರಿತು ಹೆಚ್ಚೇನೂ ಸಂತೋಷ ಹೊಂದಿರುವುದಿಲ್ಲ. ಏನೇ ಆದರೂ ನೀವು ಸಂಜೆಯಲ್ಲಿ ಹೊಸ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ವೃಷಭ

ಈ ದಿನ ನಿಮಗೆ ನಿರಾಸೆಗೊಳಿಸುವ ಆಶ್ಚರ್ಯಗಳೊಂದಿಗೆ ಕೂಡಿರುತ್ತದೆ. ಯಾವುದೂ ಯೋಜಿಸಿದಂತೆ ಮತ್ತು ನಿರೀಕ್ಷಿಸಿದಂತೆ ನಡೆಯುವುದಿಲ್ಲ. ತೀಕ್ಷ್ಣವಾದ ತಿರುವುಗಳಿರುತ್ತವೆ ಮತ್ತು ಇಡೀ ದಿನ ಕಷ್ಟಗಳಿರುತ್ತವೆ. ಆದರೆ ನೀವು ಸ್ಥಿರವಾಗಿ ಮತ್ತು ಶಾಂತವಾಗಿ ಮುನ್ನಡೆಯಬೇಕು.

ಮಿಥುನ

ನೀವು ಇಂದು ಸಂಪರ್ಕಕ್ಕೆ ಬರುವ ಜನರಿಗೆ ನಿಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಶಕ್ತರಾಗುತ್ತೀರಿ. ಇದು ಅನುಮೋದನೆ ಮತ್ತು ಸಂತೃಪ್ತಿ ನೀಡುತ್ತದೆ. ಈ ದಿನ ಒಟ್ಟಾರೆ ವಿನೋದ ಮತ್ತು ಮನರಂಜನೆಯಿಂದ ಕೂಡಿರುತ್ತದೆ.

ಕರ್ಕಾಟಕ

ಕೆಲಸದಲ್ಲಿ ಮಹತ್ತರ ಸಂಪರ್ಕಗಳನ್ನು ಹೊಂದುವ ಸಾಮರ್ಥ್ಯದಿಂದ ನಿಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದರಲ್ಲಿ ಯಶಸ್ಸು ಕಾಣುತ್ತೀರಿ. ಆದಾಗ್ಯೂ, ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ನೀವು ಎಚ್ಚರವಾಗಿರಬೇಕು. ವ್ಯವಹಾರ ಮುಗಿಸುವ ಮುನ್ನ ಅದರ ವಿವರಗಳನ್ನು ಸರಿಯಾಗಿ ಓದಿಕೊಳ್ಳುವುದು ಮುಖ್ಯ.

ಸಿಂಹ

ಮರು ಅನ್ವೇಷಣೆ ಮತ್ತು ಪುನರುಜ್ಜೀವನ ಈ ಎರಡೂ ಪದಗಳು ನಿಮ್ಮ ಜೀವನಕ್ಕೆ ಅನ್ವಯಿಸುತ್ತದೆ. ನೀವು ಇಂದು ಏನೇ ಮಾಡಿದರೂ ಚೆನ್ನಾಗಿ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಿ.

ಕನ್ಯಾ

ತರ್ಕ ಹಾಗೂ ಭಾವನೆಗಳು, ನಿಮ್ಮ ಬಾಂಧವ್ಯದಲ್ಲಿ ಇಂದು ಪ್ರಭಾವ ಬೀರುತ್ತವೆ. ಭಾವನಾತ್ಮಕವಾಗಿ ನೀವು ಕೊಂಚ ಅನುಮಾನದ ಭಾವನೆ ಅನುಭವಿಸುತ್ತೀರಿ ಮತ್ತು ಇದು ನಿಮ್ಮ ಭಾವನೆಗಳು ಹಾಗೂ ನೀವು ವಾಸ್ತವವಾಗಿ ಏನನ್ನು ನಿರೀಕ್ಷಿಸಿದ್ದರೋ ಅದರ ನಡುವೆ ಓಲಾಡುತ್ತದೆ. ಆದಾಗ್ಯೂ, ನೀವು ಇತರರ ಮೇಲೆ ಅವಲಂಬಿತರಾಗುವುದಕ್ಕಿಂತ ನಿಮ್ಮ ಮೇಲೆ ನಂಬಿಕೆ ಇಡಿ.

ತುಲಾ

ನಿಮ್ಮಲ್ಲಿನ ಭಾವಾತಿರೇಕ ಮುಂಬದಿಗೆ ಬರುತ್ತದೆ. ನೀವು ಇಂದು ಮಾಡುವ ಕೆಲಸದಲ್ಲಿ ನಿಷ್ಠೆ ಅಥವಾ ಕುಟುಂಬಕ್ಕೆ ಬದ್ಧತೆ ಎಲ್ಲದರಲ್ಲೂ ನೀವು ಕಾಣಪಡಿಸುತ್ತೀರಿ. ವ್ಯಾಪಾರದಲ್ಲಿ ನೀವು ಶ್ರೇಷ್ಠವಾದುದನ್ನು ನೀಡುವ ಮೂಲಕ ಸ್ಪರ್ಧೆ ಒಡ್ಡುತ್ತೀರಿ ಹಾಗೂ ನೀವು ಮಾಡುವುದರಲ್ಲಿ ಶ್ರೇಷ್ಠರಾಗಿರುತ್ತೀರಿ.

ವೃಶ್ಚಿಕ

ನೀವು ಇಂದು ಅನಗತ್ಯವಾಗಿ ಖರ್ಚು ಮಾಡಬಹುದು. ಅದನ್ನು ನೀವು ನಿಮ್ಮ ಪ್ರೀತಿಪಾತ್ರರಿಗೆ ಮಾಡುತ್ತೀರಿ. ಹಣ ಪ್ರೀತಿಪಾತ್ರರಿಗಿಂತ ಹೆಚ್ಚೇ ಎಂಬ ಮನೋಭಾವ ನಿಮ್ಮದು. ಹೊರಗಡೆ ಟ್ರಿಪ್ ಮತ್ತು ಸುತ್ತಾಟಕ್ಕೆ ಕರೆದೊಯ್ಯುವ ಮೂಲಕ ಅವರನ್ನು ಆಶ್ಚರ್ಯಗೊಳಿಸಲು ವಿಶೇಷ ಪ್ರಯತ್ನ ಮಾಡುತ್ತೀರಿ.

ಧನು

ನಿಮ್ಮ ತಾರೆಗಳು ಇಂದು ಪ್ರಬಲವಾಗಿವೆ ಮತ್ತು ನಿಮಗೆ ಅದ್ಭುತ ದಿನ ಮುಂದಿದೆ. ನೀವು ವೃತ್ತಿಪರರಾಗಿದ್ದೀರಿ ಇದಕ್ಕೆ ಮೆಚ್ಚುಗೆಯನ್ನೂ ಪಡೆಯುತ್ತೀರಿ. ಕೆಲಸದಲ್ಲಿ ನಿಮಗೆ ಎಲ್ಲಾ ಸಮಸ್ಯೆಗಳನ್ನೂ ದಾಟಿ ಹೋಗುವ ಜಾಣ್ಮೆ ಇದೆ. ನಿಮ್ಮ ಈ ವಿಧಾನವು ಖಂಡಿತ ನಿಮ್ಮ ಸುತ್ತಲಿನ ಜನರ ಹೃದಯಗಳನ್ನು ಗೆಲ್ಲುತ್ತದೆ.

ಮಕರ

ಕೆಲಸದಲ್ಲಿ ನಿಮಗೆ ಮಾನ್ಯತೆ ಮತ್ತು ಪುರಸ್ಕಾರಗಳು ಕಾಯುತ್ತಿವೆ, ಮತ್ತು ಬಹಳಷ್ಟು ಸಂದರ್ಭಗಳಲ್ಲಿ ಆಗುವಂತೆ ಸಹೋದ್ಯೋಗಿಗಳು ನಿಮ್ಮ ಸಂಪತ್ತು ಮತ್ತು ಪುರಸ್ಕಾರಗಳ ಕುರಿತು ಮತ್ಸರ ಪಡುವುದಿಲ್ಲ. ಅವರು ಹೊಸ ಹಾಗೂ ಸವಾಲಿನ ಯೋಜನೆಗಳನ್ನು ಕೈಗೊಳ್ಳಲು ಅತ್ಯಂತ ಅಗತ್ಯವಾದ ಉತ್ತೇಜನ ನೀಡುತ್ತಾರೆ. ಉದ್ಯೋಗ ಬದಲಿಸಲು ಬಯಸಿರುವವರು, ಕೊಂಚ ಕಾಯಿರಿ, ಇದು ನಿಮಗೆ ಸರಿಯಾದ ಕಾಲವಲ್ಲ.

ಕುಂಭ

ಸರ್ವಶಕ್ತ ನಿಮಗೆ ನೋವುಗಳನ್ನು ಕೊಟ್ಟರೆ, ಆತ ನಿಮಗೆ ಸಂತೋಷದ ಕೃಪೆಯನ್ನೂ ನೀಡುತ್ತಾನೆ. ನೀವು ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ಇಂದು ಪೂರೈಸುತ್ತೀರಿ. ಸಂಜೆ ನಂತರ ವಿಶ್ರಾಂತಿ ಮಾಡುತ್ತೀರಿ.

ಮೀನ

ನೀವು ಸ್ವಭಾವತಃ ಮುಂಗೋಪಿ ಅಥವಾ ಅಸೂಯೆ ಉಳ್ಳವರಲ್ಲ. ಆದರೆ, ಇಂದು ಈ ಎರಡನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳುವುದು ಒಳ್ಳೆಯದು. ಯಾರೋ ಒಬ್ಬರು ಇಂದು ನಿಮ್ಮ ಘನತೆಗೆ ಧಕ್ಕೆಯುಂಟು ಮಾಡಬಹುದು ಅಥವಾ ನಿಮ್ಮ ಹೆಸರು ಕೆಡಿಸಬಹುದು. ಆದರೆ, ಪ್ರಚೋದನೆಯನ್ನು ಎದುರಿಸುವ ಅತ್ಯುತ್ತಮ ವಿಧಾನವೆಂದರೆ ತಾಳ್ಮೆ ಕಳೆದುಕೊಳ್ಳದೆ ಸಹಜವಾಗಿ ಮುಂದುವರೆಯುವುದು ಒಳ್ಳೆಯದು.

ABOUT THE AUTHOR

...view details