ಕರ್ನಾಟಕ

karnataka

ETV Bharat / bharat

21 ದಿನಗಳ ಲಾಕ್​ಡೌನ್​ ನಿರ್ಣಾಯಕ ಹಾಗೂ ಅನಿವಾರ್ಯ: ಯೂರೋಪಿಯನ್​ ಥಿಂಕ್​ ಟ್ಯಾಂಕ್​ - ಲಾಕ್​ಡೌನ್​

ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಇಲ್ಲಿನ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಯೂರೋಪಿಯನ್​ ಥಿಂಕ್​ ಟ್ಯಾಂಕ್​ ಆಗಿರುವ ಯೂರೋಪಿಯನ್​ ಫೌಂಡೇಷನ್ ಆಫ್​ ಸೌಥ್ ಏಷ್ಯನ್​​ ಸ್ಟಡೀಸ್​ ಶ್ಲಾಘಿಸಿದೆ.

European think-tank
ಯೂರೋಪಿಯನ್​ ಥಿಂಕ್​ ಟ್ಯಾಂಕ್​

By

Published : Mar 31, 2020, 3:13 PM IST

ಅಮ್​ಸ್ಟರ್​ಡ್ಯಾಂ (ನೆದರ್​ಲ್ಯಾಂಡ್​): ಕೊರೊನಾ ವಿರುದ್ಧ ಹೋರಾಡಲು ಭಾರತ 21 ದಿನಗಳ ಲಾಕ್​ಡೌನ್​ ಘೋಷಣೆ ಮಾಡಿರುವುದು ನಿರ್ಣಾಯಕ ಹಾಗೂ ಸರಿಯಾದ ನಿರ್ಧಾರ ಎಂದು ಯೂರೋಪಿಯನ್​ ಥಿಂಕ್​ ಟ್ಯಾಂಕ್​ ಅಭಿಪ್ರಾಯಪಟ್ಟಿದೆ.

ಅಮ್​ಸ್ಟರ್​ಡ್ಯಾಂ ಮೂಲದ ಥಿಂಕ್​ ಟ್ಯಾಂಕ್​ ಎನ್ನಿಸಿಕೊಂಡಿರುವ ಯೂರೋಪಿಯನ್​ ಫೌಂಡೇಷನ್ ಆಫ್​ ಸೌಥ್ ಏಷ್ಯನ್​​ ಸ್ಟಡೀಸ್​ ''ಭಾರತದಲ್ಲಿರುವ 1.3 ಬಿಲಿಯನ್​ ಜನಸಂಖ್ಯೆಗೆ ಲಾಕ್​ ಡೌನ್​ ಸುಲಭವಾಗಿರುವುದಿಲ್ಲ. ಇಲ್ಲಿನ ಜನರಿಗೆ ಸಾಮಾಜಿಕ ಅಂತರ ವಿಚಿತ್ರ ಅನ್ನಿಸುವುದರ ಜೊತೆಗೆ ಯಶಸ್ವಿಯಾಗುವುದು ಸುಲಭವಾಗಿರುವುದಿಲ್ಲ'' ಎಂದಿದೆ.

ಯೂರೋಪಿಯನ್​ ಫೌಂಡೇಷನ್ ಆಫ್​ ಸೌಥ್ ಏಷ್ಯನ್​​ ಸ್ಟಡೀಸ್​ನ ಡೈರೆಕ್ಟರ್​ ಜುನೈದ್ ಖುರೇಷಿ '' ಕೊರೊನಾ ಮಹಾಮಾರಿ ವಿರುದ್ಧ ಭಾರತ ಸರ್ಕಾರ ಬೇಗನೇ ಎಚ್ಚೆತ್ತುಕೊಂಡಿದೆ. ಅತಿ ಹೆಚ್ಚು ಜನಸಂಖ್ಯೆ ಇರುವ ದಕ್ಷಿಣ ಏಷ್ಯಾದ ಈ ರಾಷ್ಟ್ರಗಳಲ್ಲಿ ವೇಗ ಕೊರೊನಾ ಹಬ್ಬುತ್ತಿದ್ದು, ಈ ಬಗ್ಗೆ ಎಚ್ಚರವಾಗಿರಬೇಕು. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು'' ಎಂದು ಎಚ್ಚರಿಸಿದ್ದಾರೆ.

ಪ್ರಧಾನಿ ಮೋದಿ ಕೊರೊನಾ ಹರಡದಂತೆ ತೆಗೆದುಕೊಂಡಿರುವ ಕ್ರಮಗಳು ಸ್ವಾಗತಾರ್ಹವಾದರೂ, ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದಿರುವ ಜುನೈದ್​ ಈ ನಿರ್ಧಾರ ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇತ್ತೀಚೆಗೆ ಲಾಕ್​ಡೌನ್​ ಅನ್ನು ನಿಭಾಯಿಸುವ ಸಲುವಾಗಿ ಪ್ಯಾಕೇಜ್​ ಘೋಷಣೆ ಮಾಡಿದ್ದು, ಈ ಬಗ್ಗೆ ಜುನೈದ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದೂವರೆ ಲಕ್ಷದ ಸನಿಹದಲ್ಲಿದ್ದಾಗ, ಇಟಲಿಯಲ್ಲಿ ಸುಮಾರು ಲಕ್ಷ ಮಂದಿಗೆ ಸೋಂಕು ಹರಡಿತ್ತು. ಇದೇ ವೇಳೆ ಭಾರತದಲ್ಲಿ ಸಾವಿರ ಮಂದಿಗೆ ಮಾತ್ರ ಸೋಂಕು ಹರಡಿತ್ತು ಎಂಬುದನ್ನು ಯುರೋಪಿಯನ್​​ ಥಿಂಕ್​ ಟ್ಯಾಂಕ್​ ಉಲ್ಲೇಖಿಸಿದೆ.

ABOUT THE AUTHOR

...view details