ನವದೆಹಲಿ: ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ ವಾಣಿಜ್ಯ ಹಡಗಿನಲ್ಲಿದ್ದ 20 ಮಂದಿ ಭಾರತೀಯರನ್ನು ಭಾನುವಾರ ಕಡಲ್ಗಳ್ಳರು ಅಪಹರಿಸಿದ್ದು, ಈ ಬಗ್ಗೆಭಾರತ ಸರ್ಕಾರವು ನೈಜೀರಿಯಾದ ಅಧಿಕಾರಿಗಳೊಂದಿಗೆ ಚರ್ಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೆ ಕಡಲ್ಗಳ್ಳರ ಅಟ್ಟಹಾಸ: ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ 20 ಭಾರತೀಯರ ಅಪಹರಣ
ಡಿ.5 ರಂದು ನೈಜೀರಿಯಾದ ಕಡಲ ತೀರದ ಭಾಗದಲ್ಲಿ ಹಾಂಗ್ ಕಾಂಗ್ ಧ್ವಜಾರೋಹಣ ಮಾಡಿದ್ದ ನೇವ್ ಕಾನ್ಸ್ಟೆಲ್ಲೇಷನ್ ಹಡಗು ಮತ್ತು 18 ಮಂದಿ ಭಾರತೀಯರನ್ನು ಕಡಲ್ಗಳ್ಳರು ಅಪಹರಿಸಿದ್ದರು. ಈ ಘಟನೆ ನಡೆದ 10 ದಿನಗಳ ಬೆನ್ನಲ್ಲೇ ಈಗ ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ ವಾಣಿಜ್ಯ ಹಡಗಿನಲ್ಲಿದ್ದ 20 ಮಂದಿ ಭಾರತೀಯರನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಡಿಸೆಂಬರ್ 15ರಂದು ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ ಎಂ ಟಿ ಡ್ಯೂಕ್ ಹಡಗಿನಿಂದ 20 ಭಾರತೀಯ ಸಿಬ್ಬಂದಿಯನ್ನು ಅಪಹರಿಸಿರುವ ಬಗ್ಗೆ ನಮಗೆ ಕಳವಳವಿದೆ. ಈ ವರ್ಷ ಈ ಪ್ರದೇಶದಲ್ಲಿ ನಡೆದ ಮೂರನೇ ಘಟನೆ ಇದಾಗಿದ್ದು, ಭಾರತೀಯ ಪ್ರಜೆಗಳ ಮೇಲೆ ಇದು ಪರಿಣಾಮ ಬೀರಲಿದೆ. ಅಪಹರಣಕ್ಕೊಳಗಾದವರ ರಕ್ಷಣೆ ಮುಖ್ಯವಾಗಿದ್ದು, ಅಬುಜಾದಲ್ಲಿನ ನಮ್ಮ ಮಿಷನ್, ನೈಜೀರಿಯಾದ ಅಧಿಕಾರಿಗಳೊಂದಿಗೆ ಮತ್ತು ನೆರೆಯ ರಾಷ್ಟ್ರಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಘಟನೆಯನ್ನು ಗಮನಕ್ಕೆ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಡಿ.5ರಂದು ನೈಜೀರಿಯಾದ ಕಡಲ ತೀರದ ಭಾಗದಲ್ಲಿ ಹಾಂಗ್ ಕಾಂಗ್ ಧ್ವಜಾರೋಹಣ ಮಾಡಿದ್ದ ನೇವ್ ಕಾನ್ಸ್ಟೆಲ್ಲೇಷನ್ ಹಡಗು ಮತ್ತು 18 ಮಂದಿ ಭಾರತೀಯರನ್ನು ಕಡಲ್ಗಳ್ಳರು ಅಪಹರಿಸಿದ್ದರು. ಈ ಘಟನೆ ನಡೆದ 10 ದಿನಗಳ ಬೆನ್ನಲ್ಲೇ ಮತ್ತೆ ಕಡಲ್ಗಳ್ಳರು ಅಟ್ಟಹಾಸ ಮೆರೆದಿರುವುದು ಆತಂಕ ಸೃಷ್ಟಿಸಿದೆ.