ಕರ್ನಾಟಕ

karnataka

ETV Bharat / bharat

ಹಾರ್ದಿಕ್​ ಪಟೇಲ್​​​ಗೆ ಕಪಾಳಮೋಕ್ಷ... ವ್ಯಕ್ತಿ ನೀಡಿದ ಸ್ಪಷ್ಟನೆ ಇಂತಿದೆ... - ಸ್ಪಷ್ಟನೆ

ಪಾಟಿದಾರ್​​ ಸಮುದಾಯದ ಹೋರಾಟಗಾರ ಹಾರ್ದಿಕ್​ ಪಟೇಲ್​​ಗೆ ಇಂದು ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಸ್ವತಃ ಆ ವ್ಯಕ್ತಿ ಸ್ಪಷ್ಟನೆ ನೀಡಿದ್ದಾನೆ.

ಕಪಾಳಮೋಕ್ಷ

By

Published : Apr 19, 2019, 5:23 PM IST

ಸುರೇಂದ್ರನಗರ (ಗುಜರಾತ್​):ಪಾಟಿದಾರ್‌ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್‌ ಪಟೇಲ್‌ ಮೇಲೆ ವ್ಯಕ್ತಿವೋರ್ವ ಹಲ್ಲೆ ಮಾಡಿರುವ ಘಟನೆ ಸಂಬಂಧಿಸಿದಂತೆ ಕಪಾಳಮೋಕ್ಷ ಮಾಡಿರುವ ವ್ಯಕ್ತಿ ಸ್ಪಷ್ಟನೆ ನೀಡಿದ್ದಾನೆ.

ಪಾಟಿದಾರ್​​ ಸಮುದಾಯಕ್ಕಾಗಿ ಹಾರ್ದಿಕ್ ಪಟೇಲ್​​ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ನನ್ನ ಪತ್ನಿಯ ಆರೋಗ್ಯ ತಪಾಸಣೆ ನಡೆಯುತ್ತಿತ್ತು. ಹಾರ್ದಿಕ್​ ಪಟೇಲರ ಹೋರಾಟದಿಂದ ಪತ್ನಿಯ ಆರೋಗ್ಯ ತಪಾಸಣೆ ತುಂಬಾ ಕಷ್ಟವಾಯಿತು.

ಹೆಚ್ಚಿನ ಓದಿಗಾಗಿ:

ಸಾರ್ವಜನಿಕ ಸಭೆಯಲ್ಲಿ ಹಾರ್ದಿಕ್​ ಪಟೇಲ್​ಗೆ ಕಪಾಳಮೋಕ್ಷ... ವಿಡಿಯೋ ವೈರಲ್​

ಅಹಮದಾಬಾದ್​​ನಲ್ಲಿ ಸಾರ್ವಜನಿಕ ಸಮ್ಮೇಳನದ ವೇಳೆ ನನ್ನ ಮಗುವಿಗೆ ಔಷಧ ತರಲು ತೆರಳಿದ್ದೆ, ಆದರೆ ಸಂಪೂರ್ಣ ಪಟ್ಟಣ ಸಮ್ಮೇಳನದ ನಿಮಿತ್ತ ಎಲ್ಲ ಮೆಡಿಕಲ್​ ಶಾಪ್​ ಹಾಗೂ ಅಂಗಡಿ- ಮುಂಗಟ್ಟುಗಳು ಬಂದ್ ಆಗಿದ್ದವು. ಇಷ್ಟೆಲ್ಲ ಸಮಸ್ಯೆ ಎದುರಾದ ಕಾರಣದಿಂದ ಹಾರ್ದಿಕ್ ಪಟೇಲ್​​ರಿಗೆ ಕಪಾಳಮೋಕ್ಷ ಮಾಡುವ ನಿರ್ಧಾರಕ್ಕೆ ಬಂದೆ ಎಂದು ಸ್ಪಷ್ಟನೆ ನೀಡಿದ್ದಾನೆ.

ABOUT THE AUTHOR

...view details