ಕರ್ನಾಟಕ

karnataka

ಕುಷ್ಠರೋಗ ರೋಗಿಗಳ ಆರೈಕೆ ಕೇಂದ್ರಕ್ಕೆ ಲಸಿಕೆ ದಾನ ಮಾಡಿದ ಭಾರತ್ ಬಯೋಟೆಕ್‌ ಅಧ್ಯಕ್ಷ

By

Published : Jun 20, 2021, 11:34 AM IST

ತಾವು ವಿದ್ಯಾಭ್ಯಾಸ ಪಡೆದ ಹಾಗೂ ರೋಗಿಗಳ ಆರೈಕೆ ಮಾಡುತ್ತಿರುವ ಸಂಸ್ಥೆಗೆ ತಮ್ಮ ಕೋವಾಕ್ಸಿನ್ ಲಸಿಕೆಯನ್ನು ಉಚಿತವಾಗಿ ನೀಡಿ ಭಾರತ್ ಬಯೋಟೆಕ್‌ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣ ಎಲ್ಲ ಅವರು ನೆರವಾಗಿದ್ದಾರೆ.

Bharat Biotech MD Krishna Ella donates Covaxin to rehabilitation centre
ಡಾ.ಕೃಷ್ಣ ಎಲ್ಲ

ಹೈದರಾಬಾದ್ (ತೆಲಂಗಾಣ):ಭಾರತಕ್ಕೆ ದೇಶೀಯ ಕೋವಿಡ್​ ಲಸಿಕೆ ಉತ್ಪಾದಿಸುತ್ತಿರುವ ಹೈದರಾಬಾದ್​ನ ಭಾರತ್ ಬಯೋಟೆಕ್‌ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣ ಎಲ್ಲ ಅವರು ತಮ್ಮ ಕೋವಾಕ್ಸಿನ್ ಲಸಿಕೆಯ 4,000 ಡೋಸ್​ಗಳನ್ನು ಮಹಾರಾಷ್ಟ್ರದ ಆನಂದವನ್‌ ಸಮುದಾಯ ಪುನರ್ವಸತಿ ಕೇಂದ್ರಕ್ಕೆ ದಾನ ನೀಡಲು ಮುಂದಾಗಿದ್ದಾರೆ.

ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ದಿವಂಗತ ಬಾಬಾ ಆಮ್ಟೆ ಅವರು ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯಲ್ಲಿ 1949ರಲ್ಲಿ ಕುಷ್ಠರೋಗ ರೋಗಿಗಳಿಗೆ ಮತ್ತು ವಿಶೇಷ ಚೇತನರಿಗಾಗಿ ಆನಂದವನ ಆಶ್ರಮವನ್ನು ಸ್ಥಾಪಿಸಿದ್ದರು. ಕೃಷ್ಣ ಎಲ್ಲ ಅವರು ಬಾಬಾ ಆಮ್ಟೆ ಅವರ ಮಹಾರೋಗಿ ಸೇವಾ ಸಮಿತಿಯ ಅಡಿಯಲ್ಲಿ ಸ್ಥಾಪಿಸಲಾಗುತ್ತಿದ್ದ ಆನಂದ ನಿಕೇತನ್ ಕೃಷಿ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. 1973 ರಲ್ಲಿ ಕೃಷ್ಣ ಎಲ್ಲ ಈ ಕಾಲೇಜಿನಲ್ಲಿ ಬಿಎಸ್ಸಿ ಕೋರ್ಸ್​ಗೆ ಸೇರಿದ್ದರು.

ಇದನ್ನೂ ಓದಿ:ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಯಶಸ್ವಿ: ಡಾ. ಪ್ರದೀಪ್

ಹೀಗಾಗಿ ಕೃಷ್ಣ ಎಲ್ಲ ತಾವು ವಿದ್ಯಾಭ್ಯಾಸ ಪಡೆದ ಹಾಗೂ ರೋಗಿಗಳ ಆರೈಕೆ ಮಾಡುತ್ತಿರುವ ಸಂಸ್ಥೆಗೆ ನೆರವಾಗಲು ಬಯಸಿದ್ದಾರೆ. ಆನಂದವನ್‌ ಆಶ್ರಮದಲ್ಲಿರುವವರ ಮೇಲೆ ಕೋವಿಡ್​ ಪರಿಣಾಮ ಬೀರಿರುವ ವಿಷಯ ತಿಳಿಯುತ್ತಿದ್ದಂತೆಯೇ 2,000 ಡೋಸ್​ಗಳನ್ನು ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕಾಗಿ ಬಾಬಾ ಆಮ್ಟೆಯ ಮೊಮ್ಮಗ ಕಸ್ತುಬಾ ಅಮ್ಟೆ ಕೃಷ್ಣ ಎಲ್ಲ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ABOUT THE AUTHOR

...view details