ಕರ್ನಾಟಕ

karnataka

ಭಗತ್​ ಸಿಂಗ್​ ಹುಟ್ಟೂರಿನಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸುವೆ: ಆಪ್‌ನ ಭಗವಂತ್​ ಮನ್ ಘೋಷಣೆ

ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷವು 117 ಕ್ಷೇತ್ರಗಳ ಪೈಕಿ ಸುಮಾರು 92 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಪ್ರಚಂಡ ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಹಾಲಿ ಸಂಸದರಾಗಿರುವ ಭಗವಂತ್​ ಮನ್​ ಧುರಿ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಪಡೆದಿದ್ದಾರೆ.

By

Published : Mar 10, 2022, 3:43 PM IST

Published : Mar 10, 2022, 3:43 PM IST

mann
mann

ನವದೆಹಲಿ: ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ಭಗತ್​ ಸಿಂಗ್​ ಅವರ ಗ್ರಾಮ ಖಟ್ಕರ್​ಕಲನ್​ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತೇನೆ ಎಂದು ಪಂಜಾಬ್​ನ ಆಮ್​​ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್​ ಮನ್​ ಘೋಷಿಸಿದ್ದಾರೆ.

ಪಂಜಾಬ್​ನಲ್ಲಿ ಆಮ್​​ ಆದ್ಮಿ ಪಕ್ಷವು ಭಾರಿ ಮುನ್ನಡೆ ಸಾಧಿಸಿದ್ದು ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಏರಲು ಸಜ್ಜಾಗಿದೆ. ಸಂಗ್ರೂರ್​​​ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಭಗವಂತ್​ ಮನ್ , ನಾನು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ಪ್ರಕಟಿಸಿದರು.

ಅಲ್ಲದೇ, ರಾಜ್ಯದ ಯಾವುದೇ ಸರ್ಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿ ಭಾವಚಿತ್ರಗಳ ಅಳವಡಿಸುವಂತಿಲ್ಲ. ಬದಲಿಗೆ ಅಲ್ಲಿ ಭಗತ್​ ಸಿಂಗ್ ಮತ್ತು ಬಾಬಾಸಾಹೇಬ್​ ಅಂಬೇಡ್ಕರ್​ ಭಾವಚಿತ್ರಗಳ ಅಳವಡಿಸಲು ಕ್ರಮ ವಹಿಸುವುದಾಗಿ ಅವರು ಹೇಳಿದ್ದಾರೆ.

ಹಾಲಿ ಸಂಸದರಾಗಿರುವ ಭಗವಂತ್​ ಮನ್​ ಈ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಧುರಿ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇವರು ಕಾಂಗ್ರೆಸ್​​ ಅಭ್ಯರ್ಥಿ ದಲ್​ವೀರ್​ ಸಿಂಗ್​ ವಿರುದ್ಧ 58,206 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಇನ್ನು, ಖಟ್ಕರ್​ಕಲನ್​ ಗ್ರಾಮದಲ್ಲಿ ಭಗತ್​ ಸಿಂಗ್ ಸ್ಮಾರಕವಿದ್ದು, ಇಲ್ಲಿ ಅವರ ಚಿತಾಭಸ್ಮವನ್ನು ಸಂರಕ್ಷಿಸಲಾಗಿದೆ.

ಇದನ್ನೂ ಓದಿ:Punjab Result: ಪಂಜಾಬ್​ನಲ್ಲಿ ಆಪ್​ಗೆ ಭಾರಿ ಮುನ್ನಡೆ.. ಮಾಜಿ ಸಿಎಂ ಕ್ಯಾ.​ ಅಮರೀಂದರ ಸಿಂಗ್​ಗೆ ಸೋಲು

ABOUT THE AUTHOR

...view details