ಕರ್ನಾಟಕ

karnataka

ETV Bharat / bharat

ಸಚಿವರ ಪುತ್ರನಿಗೆ ಜಾಮೀನು: ಪ್ರಧಾನಿಗೆ ದೇಶದ ಬಗ್ಗೆ ನೈತಿಕ ಹೊಣೆಗಾರಿಕೆ ಇದೆ- ಪ್ರಿಯಾಂಕಾ - ಆಶಿಶ್ ಮಿಶ್ರಾಗೆ ಅಲಹಾಬಾದ್ ಹೈಕೋರ್ಟ್ ಜಾಮೀನು

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ರಾಜೀನಾಮೆ ಕೇಳದಿರುವ ಬಗ್ಗೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಗುರುವಾರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿಯಾಗಿ ರಾಷ್ಟ್ರದ ಬಗ್ಗೆ ಮೋದಿಗೆ ನೈತಿಕ ಹೊಣೆಗಾರಿಕೆ ಇದೆ ಎಂದು ಗಾಂಧಿ ಹೇಳಿದರು.

priyanka-gandhi
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ

By

Published : Feb 10, 2022, 8:22 PM IST

ನೋಯ್ಡಾ(ರಾಂಪುರ್): ಪ್ರಧಾನಿಯೊಬ್ಬರಿಗೆ ದೇಶದ ಬಗ್ಗೆ ನೈತಿಕ ಹೊಣೆಗಾರಿಕೆ ಇದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಗುರುವಾರ ಲಖಿಂಪುರ ಖೇರಿ ಹಿಂಸಾಚಾರದ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನ ರಾಜೀನಾಮೆ ಕೇಳದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಂಪುರದಲ್ಲಿ ಚುನಾವಣಾ ಕಾರ್ಯಕ್ರಮವೊಂದರಲ್ಲಿ ಪ್ರಿಯಾಂಕಾ ಗಾಂಧಿ ಮಾತನಾಡುತ್ತಾ, ಅಕ್ಟೋಬರ್ 3, 2021 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕೋನಾ ಪ್ರದೇಶದಲ್ಲಿ ಎಂಟು ಜನರು ನಡೆಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಅಲಹಾಬಾದ್ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ. ಈ ಹಿಂಸಾಚಾರದಲ್ಲಿ ನಾಲ್ವರು ರೈತರು ಕೊಲ್ಲಲ್ಪಟ್ಟಿದ್ದರು.

ತಮ್ಮ ಮಂತ್ರಿಯ ಮಗ ಆರು ಜನ ರೈತರನ್ನು ಕೊಚ್ಚಿ ಹಾಕಿದ್ದಾನೆ. ಆದರೆ, ರಾಜೀನಾಮೆ ಕೊಟ್ಟಿದ್ದಾನಾ?. ಎಲ್ಲರೂ ನಮ್ಮ ಪ್ರಧಾನಿ ಒಳ್ಳೆ ಮನುಷ್ಯ ಅಂತ ಹೇಳ್ತಾರೆ. ಅವರಿಗೆ ದೇಶದ ಬಗ್ಗೆ ನೈತಿಕ ಹೊಣೆಗಾರಿಕೆ ಇಲ್ಲವೇ?" ಕೇಳಿದರು. 'ಇಂದು ಆ ವ್ಯಕ್ತಿಗೆ ಜಾಮೀನು ಸಿಕ್ಕಿದೆ. ಶೀಘ್ರದಲ್ಲೇ ಅವನು ಬಹಿರಂಗವಾಗಿ ತಿರುಗಾಡುತ್ತಾನೆ. ಆದರೆ, ಸರ್ಕಾರ ಯಾರನ್ನು ಉಳಿಸಿತು?. ರೈತರನ್ನು ಉಳಿಸಿತು?. ರೈತರನ್ನು ಕೊಲ್ಲುವಾಗ ಪೊಲೀಸರು ಮತ್ತು ಆಡಳಿತ ಎಲ್ಲಿತ್ತು? ಎಂದು ಅವರು ಕೇಳಿದ್ದಾರೆ.

ಲಖೀಂಪುರ ಖೇರಿ ಘಟನೆಯ ಸಮಯದಲ್ಲಿ ಪೊಲೀಸರು ಎಲ್ಲೂ ಕಾಣಲಿಲ್ಲ. ಆದರೆ, ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲು ಪ್ರಯತ್ನಿಸಿದ ಕಾಂಗ್ರೆಸ್ ಸದಸ್ಯರನ್ನು ತಡೆಯಲು ಮತ್ತು ಯಾರಿಗೂ ಹಾನಿ ಮಾಡಲಿಲ್ಲ ಎಂದು ಉತ್ತರ ಪ್ರದೇಶದ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.

'ಆದರೆ, ಕೇಡು ಮಾಡಿದ ವ್ಯಕ್ತಿಯ ತಂದೆ ಇಂದಿಗೂ ವೇದಿಕೆಯ ಮೇಲೆ ನಿಂತಿದ್ದಾರೆ. ಒಬ್ಬ ಪ್ರಧಾನಿಗೆ ರಾಷ್ಟ್ರದ ಬಗ್ಗೆ ನೈತಿಕ ಹೊಣೆಗಾರಿಕೆ ಇದೆ. ಈ ಜವಾಬ್ದಾರಿಯನ್ನು ಪೂರೈಸುವುದು ಅವರ ಧರ್ಮವಾಗಿದೆ. ಈ ಧರ್ಮವು ಪ್ರತಿ ಧರ್ಮಕ್ಕಿಂತ ಮೇಲಿದೆ. ಯಾವ ರಾಜಕಾರಣಿ, ಪ್ರಧಾನಿ ಸಚಿವರು ಅಥವಾ ಸರ್ಕಾರ ಇದನ್ನು ಮಾಡಲು ವಿಫಲವಾದರೆ ನಿರ್ಲಕ್ಷಿಸಬೇಕು' ಎಂದು ಅವರು ಹೇಳಿದರು.

ನಿಮ್ಮೊಂದಿಗೆ ಆಡುತ್ತಿರುವ ಆಟವನ್ನು ಅರ್ಥಮಾಡಿಕೊಳ್ಳಿ. ಉತ್ತರ ಪ್ರದೇಶದ ಜನರು ಬುದ್ಧಿವಂತರು ಎಂದು ನನಗೆ ತಿಳಿದಿದೆ. ನಿಮ್ಮೆಲ್ಲರಿಂದ ನಾನು ಕಲಿತಿದ್ದೇನೆ. ನಿಮ್ಮ ಪರವಾಗಿ ಯಾರು ಕೆಲಸ ಮಾಡುತ್ತಾರೆಂದು ನಿಮಗೆ ತಿಳಿದಿದೆ.

ಹಾಗಾದರೆ, ನೀವು ಏಕೆ ಜಾತಿ, ಕೋಮುವಾದದ ಭಾಷಣಗಳಿಂದ ದಾರಿ ತಪ್ಪಿಸುತ್ತಿದ್ದೀರಿ? ಮತ್ತು ವಾಟ್ಸ್​ಆಪ್​ನಲ್ಲಿ (ವೀಡಿಯೊಗಳನ್ನು) ನೋಡುವುದೇ? ಇದು ನಿಮಗೆ ಪ್ರಯೋಜನವಾಗುತ್ತಿಲ್ಲ. ಆದರೆ, ಇದು ರಾಜಕಾರಣಿಗಳಿಗೆ ಮಾತ್ರ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಓದಿ:ಕಾಂಗ್ರೆಸ್ ಪ್ರಧಾನ ಕಚೇರಿ, ಸೋನಿಯಾ ಗಾಂಧಿ ನಿವಾಸದ ಬಾಡಿಗೆ ಪಾವತಿಸಿಲ್ಲ: RTI ನಿಂದ ಬಹಿರಂಗ


For All Latest Updates

TAGGED:

ABOUT THE AUTHOR

...view details