ಕರ್ನಾಟಕ

karnataka

By

Published : Feb 12, 2021, 11:05 AM IST

ETV Bharat / bharat

ಹಥ್ರಾಸ್​ ಯುವತಿ ಅತ್ಯಾಚಾರ, ಕೊಲೆ ಪ್ರಕರಣ : ಇಬ್ಬರು ಆರೋಪಿಗಳ ಜಾಮೀನು ಅರ್ಜಿ ವಜಾ

ಕಳೆದ ತಿಂಗಳು ಆರೋಪಿ ರಾಮು ಜಾಮೀನು ಕೋರಿ ಸಲ್ಲಿಸದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು..

ಎಸ್‌ಸಿ / ಎಸ್‌ಟಿ ನ್ಯಾಯಾಲಯ
Bail plea of 2 Hathras accused rejected

ಹತ್ರಾಸ್ (ಉತ್ತರ ಪ್ರದೇಶ):ಹಥ್ರಾಸ್ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಇಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ಎಸ್‌ಸಿ/ಎಸ್‌ಟಿ ನ್ಯಾಯಾಲಯ ವಜಾಗೊಳಿಸಿದೆ.

ಪ್ರಕರಣದ ಆರೋಪಿಗಳಾದ ರವಿ ಮತ್ತು ಲವ್‌ಕುಶ್ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹಥ್ರಾಸ್​ನ ನ್ಯಾಯಾಧೀಶೆ ಬಿ ಡಿ ಭಾರತಿಯವರು, ವಾದ-ಪ್ರತಿವಾದ ಆಲಿಸಿದರು. ಅರ್ಜಿಯನ್ನ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದ ಸಂತ್ರಸ್ತೆಯ ಪರ ವಕೀಲ ಭಾಗೀರಥ್ ಸಿಂಗ್ ತಿಳಿಸಿದ್ದಾರೆ.

ಓದಿ: ಪಿಎಂ ಮೋದಿ ಭಾರತದ ಭೂಪ್ರದೇಶವನ್ನ ಚೀನಾಗೆ ಬಿಟ್ಟುಕೊಟ್ಟಿದ್ದಾರೆ : ರಾಹುಲ್‌ ಗಾಂಧಿ ಆರೋಪ

ಕಳೆದ ತಿಂಗಳು ಆರೋಪಿ ರಾಮು ಜಾಮೀನು ಕೋರಿ ಸಲ್ಲಿಸದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಸಿಬಿಐ ಹಥ್ರಾಸ್‌ನ ನ್ಯಾಯಾಲಯದಲ್ಲಿ ಸಂದೀಪ್, ರವಿ, ರಾಮು ಮತ್ತು ಲವ್‌ಕುಶ್ ವಿರುದ್ಧ ಆರೋಪಗಳ ಚಾರ್ಜ್‌ಶೀಟ್ ಸಲ್ಲಿಸಿತ್ತು.

ABOUT THE AUTHOR

...view details