ಕರ್ನಾಟಕ

karnataka

By

Published : Jan 11, 2023, 1:19 PM IST

ETV Bharat / bharat

ಜನರಲ್ ಕೌನ್ಸಿಲ್ ಆಫ್ ಸಿಖ್ಸ್​ ಫಾರ್ ಜಸ್ಟಿಸ್ ಸಂಘಟನೆಯಿಂದ ಆಡಿಯೋ ಮೆಸೇಜ್ ಬಿಡುಗಡೆ

ಪಂಜಾಬ್​ ಪ್ರವೇಶಿಸಿದ ಭಾರತ್​ ಜೋಡೋ - ಜನರಲ್ ಕೌನ್ಸಿಲ್ ಆಫ್ ಸಿಖ್ಸ್​ ಫಾರ್ ಜಸ್ಟಿಸ್ ಸಂಘಟನೆಯಿಂದ ಆಡಿಯೋ ಮೆಸೇಜ್ ರಿಲೀಸ್​- ಖೂನ್ ದಾ ಬದ್ಲಾ ಖೂನ್ ಎಂದು ಆಡಿಯೋಗೆ ಶೀರ್ಷಿಕೆ

ಜನರಲ್ ಕೌನ್ಸಿಲ್ ಆಫ್ ಸಿಖ್ಸ್​ ಫಾರ್ ಜಸ್ಟಿಸ್ ಸಂಘಟನೆಯಿಂದ ಆಡಿಯೋ ಮೆಸೇಜ್ ಬಿಡುಗಡೆ
http://10.10.50.85:6060/reg-lowres/11-January-2023/rahul-baba1_1101newsroom_1673421082_189.jpg

ಹೈದರಾಬಾದ್: ಜನರಲ್ ಕೌನ್ಸಿಲ್ ಆಫ್ ಸಿಖ್ಸ್​ ಫಾರ್ ಜಸ್ಟಿಸ್ ಸಂಘಟನೆಯ ಗುರ್ಪತವಂತ್ ಸಿಂಗ್ ಪನ್ನು ಪಂಜಾಬ್ ರಾಜ್ಯದ ಜನತೆಯ ಪರವಾಗಿ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಈ ಆಡಿಯೊಗೆ ಖೂನ್ ದಾ ಬದ್ಲಾ ಖೂನ್ (ರಕ್ತದ ಪ್ರತೀಕಾರ ರಕ್ತದಿಂದ) ಎಂದು ಶೀರ್ಷಿಕೆ ನೀಡಲಾಗಿದೆ. ಇದರಲ್ಲಿ 1955 ರಿಂದ 1984 ರ ಅವಧಿಯ ಗಾಂಧಿ-ನೆಹರು ಕುಟುಂಬದ ಆಡಳಿತವನ್ನು ನೆನಪಿಸಲಾಗಿದೆ.

ಎಸ್​ಎಫ್​ಜೆ ಜನರಲ್ ಕಾನ್ಸುಲ್ ಆಗಿರುವ ಗುರ್ಪತವಂತ್ ಸಿಂಗ್ ಪನ್ನು ಸಿಖ್ ಇತಿಹಾಸದ ಬಗ್ಗೆ ರಾಹುಲ್ ಗಾಂಧಿಯವರಿಗೆ ನೆನಪಿಸಿ ಕೊಟ್ಟಿದ್ದು, ದರ್ಬಾರ್ ಸಾಹಿಬ್ ಮೇಲೆ ದಾಳಿ ಮಾಡಿದವರ ವಂಶವನ್ನೇ ನಿರ್ನಾಮ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದರಲ್ಲಿ ರಾಹುಲ್ ಗಾಂಧಿ ಮಾತ್ರ ಜೀವಂತವಿದ್ದಾರೆ ಎಂದು ಆಡಿಯೋ ಮೆಸೇಜ್​ನಲ್ಲಿ ಹೇಳಲಾಗಿದೆ. ಕಾಶ್ಮೀರಿ ಹೋರಾಟಗಾರರ ನೆರವಿನಿಂದ ತಾವು ರಾಹುಲ್ ಗಾಂಧಿಯವರ ಅಮೃತಸರ್​ನಿಂದ ಶ್ರೀನಗರದವರೆಗಿನ ಪ್ರಯಾಣವನ್ನು ಯೋಜಿಸುತ್ತಿರುವುದಾಗಿ ಹೇಳಿದ್ದಾರೆ. ಲಾಲ್​ ಚೌಕ್​ನಲ್ಲಿ ರಾಷ್ಟ್ರಧ್ವಜ ಹಾರಿಸಲು ರಾಹುಲ್ ಗಾಂಧಿಗೆ ಅವಕಾಶ ನೀಡಲ್ಲ ಎಂದು ಹೇಳಿದ್ದಾರೆ.

ಅಕಾಲಿ ದಳ ಬಾದಲ್ ಇದು ಭಾರತ ಸರ್ಕಾರದ ಪರ್ಯಾಯ ಮುಖವಾಗಿದ್ದು, ಅದರಲ್ಲಿನ ಶಿರೋಮಣಿ ಕಮೀಟಿಯ ಅಕಾಲ ತಖ್ತ್​ ಜಥೇದಾರ್ ಅಧ್ಯಕ್ಷ ನಡೆದಾಡುವ ಶವವಾಗಿದ್ದಾರೆ ಎಂದು ಗುರ್ಪತವಂತ್ ಸಿಂಗ್ ಪನ್ನು ಆಡಿಯೋ ಮೆಸೇಜ್​ನಲ್ಲಿ ತಿಳಿಸಿದ್ದಾರೆ. ಅಸ್ತ್ರಗಳಿಂದ ಖಲಿಸ್ತಾನವನ್ನು ಸಾಧಿಸಲು ಬಯಸುವ ಇತರ ಮತೀಯ ಸಂಘಟನೆಗಳು ರಾಹುಲ್ ಗಾಂಧಿಯನ್ನು ವಿರೋಧಿಸದಿರುವುದು ಎಲ್ಲರನ್ನೂ ಹೇಗೋ ಒಂದೇ ದಡದಲ್ಲಿ ನಿಲ್ಲುವಂತೆ ಮಾಡುತ್ತದೆ ಎಂದು ಅವರು ಹೇಳಿದರು. ಗಿಯಾನಿ ಹರ್‌ಪ್ರೀತ್ ಸಿಂಗ್ ಮತ್ತು ಹರ್ಜಿಂದರ್ ಸಿಂಗ್ ಧಾಮಿ ಅವರನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಇಂದು ಪಂಜಾಬ್ ನಲ್ಲಿ ಆರಂಭವಾಗಿದೆ. ಕಾಲ್ನಡಿಗೆಯ ಪ್ರಯಾಣವು ಸಿರ್ಹಿಂದ್‌ನಿಂದ ಪ್ರಾರಂಭವಾಯಿತು. ಶಂಭು ಗಡಿಯ ಮೂಲಕ ಪ್ರವೇಶಿಸಿದ ನಂತರ, ಬೆಳಗ್ಗೆ ಯಾತ್ರೆಯನ್ನು ಪ್ರಾರಂಭಿಸುವ ಮೊದಲು, ರಾಹುಲ್ ಗಾಂಧಿ ಅವರು ಫತೇಘರ್ ಸಾಹಿಬ್‌ನ ಗುರುದ್ವಾರದಲ್ಲಿ ನಮನ ಸಲ್ಲಿಸಿದರು ಮತ್ತು ಅದೇ ಸಮಯದಲ್ಲಿ ರೋಜಾ ಷರೀಫ್ ಅವರಿಗೆ ಪೂಜೆ ಸಲ್ಲಿಸಿದರು. ಹರ್ಯಾಣದ ಕಾಂಗ್ರೆಸ್ ನಾಯಕ ಪಂಜಾಬ್‌ನ ಕಾಂಗ್ರೆಸ್ ನಾಯಕರಿಗೆ ಧ್ವಜವನ್ನು ಹಸ್ತಾಂತರಿಸುವುದರೊಂದಿಗೆ ಪ್ರಯಾಣವನ್ನು ಪ್ರಾರಂಭಿಸಿದರು. ನಿನ್ನೆ ರಾಹುಲ್ ಗಾಂಧಿ ಅವರು ಅಮೃತಸರದಲ್ಲಿರುವ ಸಚ್ಖಂಡ್ ಶ್ರೀ ಹರಿಮಂದರ್ ಸಾಹಿಬ್‌ಗೆ ಪೂಜೆ ಸಲ್ಲಿಸಿದರು.

ಹರ್ಯಾಣಕ್ಕಿಂತ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದು ಊಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಬೆಳಗ್ಗೆ ಫತೇಘರ್ ಸಾಹಿಬ್ ಜಿಲ್ಲೆಯ ಸಿರ್ಹಿಂದ್‌ನ ನ್ಯೂ ದಾನ ಮಂಡಿಯಿಂದ ಭಾರತ್ ಜೋಡೋ ಯಾತ್ರೆಯ ಎಂಟು ದಿನಗಳ ಪಂಜಾಬ್ ಘಟ್ಟವನ್ನು ಪ್ರಾರಂಭಿಸಿದರು. ಯಾತ್ರೆ ಆರಂಭಿಸುವ ಮುನ್ನ ಭಾಷಣ ಮಾಡಿದ ರಾಹುಲ್, ತಮಿಳುನಾಡಿನಿಂದ ಯಾತ್ರೆ ಆರಂಭಿಸಿದಾಗ ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಹೆಚ್ಚಿನ ಪ್ರತಿಕ್ರಿಯೆ ಸಿಗುವುದಿಲ್ಲ ಎಂದು ಜನ ಹೇಳಿದ್ದರು. ಆದರೆ ತಮಿಳುನಾಡು ಮತ್ತು ಕೇರಳಕ್ಕಿಂತ ಕರ್ನಾಟಕದಲ್ಲಿ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಕೊರೆವ ಚಳಿಯಲ್ಲೂ ಕೇವಲ ಟೀ ಶರ್ಟ್​; ರಹಸ್ಯ ಬಿಚ್ಚಿಟ್ಟ ರಾಹುಲ್ ಗಾಂಧಿ!

ABOUT THE AUTHOR

...view details