ಕರ್ನಾಟಕ

karnataka

ಸೋಮವಾರದ ರಾಶಿ ಭವಿಷ್ಯ: ಈ ರಾಶಿಯವರು ಹೊಸ ಕೆಲಸ ಪ್ರಾರಂಭಿಸಲು ಇಂದು ಪವಿತ್ರ ದಿನ

By

Published : Mar 27, 2023, 5:01 AM IST

ಇಂದಿನ ರಾಶಿ ಭವಿಷ್ಯ..

Monday Horoscope
ಸೋಮವಾರದ ರಾಶಿ ಭವಿಷ್ಯ

ಮೇಷ :ಇಂದು ನಿಮ್ಮ ಸ್ವತ್ತುಗಳ ಕುರಿತು ಅತ್ಯಂತ ಆತಂಕ ಹೊಂದಿರುತ್ತೀರಿ, ಮತ್ತು ಅವುಗಳನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ಈ ಮನಸ್ಥಿತಿ ಯಾರೋ ಒಬ್ಬರಿಂದ ಉಂಟಾಗಿರಬಹುದು. ಪ್ರೀತಿಗೆ ಸಂಬಂಧಿಸಿದ ವ್ಯವಹಾರಗಳು ಉತ್ತಮ ಪ್ರಗತಿ ಕಾಣುತ್ತವೆ, ಮತ್ತು ನಿಮ್ಮ ವೈವಾಹಿಕ ಜೀವನ ಅರಳುತ್ತದೆ.

ವೃಷಭ:ಒಂದು ಕಿರುಪ್ರವಾಸದ ಸಾಧ್ಯತೆ ಇಂದು ನಿಮಗಿದೆ. ಅದಕ್ಕೆ ಹೊರಡುವ ಮುನ್ನ, ನೀವು ನಿಮ್ಮ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ. ನೀವು ಹೊಸ ವೇಳಾಪಟ್ಟಿ ಕುರಿತು ನೀವು ಸಂತೋಷವಾಗಿಲ್ಲ ಮತ್ತು ನಿಮ್ಮ ಮೊದಲ ಯೋಜನೆಗೆ ಬದ್ಧರಾಗಲು ನಿರ್ಧರಿಸುತ್ತೀರಿ, ದಿನದ ಅಂತ್ಯಕ್ಕೆ ನೀವು ವಿಚಲಿತ, ಅಹಿತದ ಭಾವನೆ ಹೊಂದುವ ಸಾಧ್ಯತೆ ಇದೆ. ಅಗತ್ಯವಿರುವ ಬದಲಾವಣೆಗಳಿಗೆ ನೀವು ಹೊಂದಿಕೊಂಡರೆ ಉತ್ತಮ, ನಂತರ ಪ್ರವಾಸವನ್ನು ಆನಂದದ ಮತ್ತ ಫಲದಾಯಕವಾಗಿಸಲು ಧನಾತ್ಮಕ ಪ್ರಯತ್ನ ನಡೆಸಬಹುದು.

ಮಿಥುನ:ನೀವು ನಿಮ್ಮ ಅನಿರೀಕ್ಷಿತ ಏರಿಳಿತದ ಮನಸ್ಥಿತಿಯಿಂದ ಪದೇ ಪದೇ ಎರಡು ಮನಸ್ಸುಗಳಲ್ಲಿ ಸಿಲುಕಿಕೊಳ್ಳುತ್ತೀರಿ. ಇದು ಸಾಕಷ್ಟು ಮಾನಸಿಕ ಒತ್ತಡ ಸೃಷ್ಟಿಸುತ್ತದೆ. ನೀವು ನಿಮ್ಮ ಸಮಸ್ಯೆಗಳನ್ನು ನಿಮ್ಮ ಕುಟುಂಬ ಸದಸ್ಯರು ಮತ್ತು ತಜ್ಞರೊಂದಿಗೆ ಚರ್ಚೆ ನಡೆಸುವ ಮೂಲಕ ನಿಮ್ಮ ಆತಂಕ ಕಡಿಮೆ ಮಾಡಬಹುದು. ಇಂದು ನಿಮ್ಮ ಆರೋಗ್ಯಕ್ಕೆ ಗಮನ ನೀಡಬೇಕಾದುದು ಅಗತ್ಯ.

ಕರ್ಕಾಟಕ: ಕಲ್ಪನೆಯಲ್ಲಿ ಮುಳುಗಿಹೋಗುವ ದಿನ. ನಿಮ್ಮ ಆಲೋಚನೆಗಳು ಅದ್ಭುತವಾಗಿವೆ. ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಜನರು ನಿಮ್ಮ ಪ್ರಯತ್ನಗಳನ್ನು ಶ್ಲಾಘಿಸುತ್ತಾರೆ. ಸೃಜನಶೀಲತೆ ಮತ್ತು ಯಶಸ್ಸಿನ ದಿನವಾಗಿದ್ದು ಆಶೀರ್ವಾದಗಳು ನಿಮ್ಮ ಮೇಲಿವೆ.

ಸಿಂಹ: ಒಂದು ಸವಾಲಿನ ದಿನ ನಿಮಗಾಗಿ ಕಾದಿದೆ. ನೀವು ಕೆಲ ಆತಂಕಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತೀರಿ, ಆದರೆ ನಿಮ್ಮ ಎಲ್ಲ ಕೆಲಸಗಳನ್ನೂ ನೀವು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದರ್ಥವಲ್ಲ. ಆದರೆ ನಿಮ್ಮ ಕೆಲಸದ ದೃಷ್ಟಿಯಿಂದ ನಿರೀಕ್ಷೆಗಳು ಹೆಚ್ಚಾಗುತ್ತವೆ. ನೀವು ನಿಮ್ಮ ಮನೆ ಹಾಗೂ ಉದ್ಯೋಗದ ಸ್ಥಳದ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ.

ಕನ್ಯಾ: ಇಂದು ನೀವು ತೊಡಗಿಕೊಳ್ಳುವ ಯಾವುದೇ ಕೆಲಸದಲ್ಲೂ ಗಮನಾರ್ಹವಾದ ಸಾಧನೆ ಮಾಡುತ್ತೀರಿ. ವಿದೇಶದಲ್ಲಿ ವ್ಯಾಪಾರೋದ್ಯಮ ಪ್ರಾರಂಭಿಸುವ ನಿಮ್ಮ ಬಯಕೆ ಫಲ ನೀಡುತ್ತದೆ. ನಿಮ್ಮ ಸ್ವಂತ ಇಮೇಜ್ ಅನ್ನು ಗಮನಾರ್ಹವಾಗಿ ಉತ್ತಮಪಡಿಸಲು ನಿಮ್ಮ ವೈಯಕ್ತಿಕ ನೋಟದಲ್ಲಿ ಅಗತ್ಯವಾದ ಸುಧಾರಣೆಗಳನ್ನು ಮಾಡುವುದು ಅಗತ್ಯ.

ತುಲಾ:ಯಾವುದೇ ಹೊಸ ಕೆಲಸ ಪ್ರಾರಂಭಿಸಲು ಇಂದು ಪವಿತ್ರ ದಿನವಾಗಿದೆ. ಕಛೇರಿಯಲ್ಲಿ ನೀವು ಹೊಸ ಸ್ಥಾನಗಳನ್ನು ಪಡೆಯುತ್ತೀರಿ, ಮತ್ತು ಅದರಲ್ಲಿ ಉನ್ನತ ಸಾಧನೆ ಮಾಡುತ್ತೀರಿ. ನೀವು ಕೈಗೊಂಡ ಯಾವುದೇ ಕೆಲಸದಲ್ಲಿಯೂ ನೀವು ಯಶಸ್ಸು ಪಡೆಯುತ್ತೀರಿ. ಇಂದು ನಿಮಗೆ ಅದೃಷ್ಟದ ದಿನವಾಗಿದೆ.

ವೃಶ್ಚಿಕ:ನಿಮ್ಮ ಹೊಸ ವ್ಯಾಪಾರೋದ್ಯಮ ನಿಮ್ಮನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುವ ಸಾಧ್ಯತೆ ಇದೆ. ನೀವು ಕೆಲಸದಲ್ಲಿ ನಿರೀಕ್ಷೆಗಳನ್ನು ತಲುಪಲು ನಿಮ್ಮ ವೈಯಕ್ತಿಕ ಜೀವನ ನಿರ್ಲಕ್ಷಿಸುತ್ತೀರಿ. ಯೋಜಿಸಿದಂತೆ ವಿಷಯಗಳು ನಡೆಯದೇ ಇರುವುದರಿಂದ ನಿರಾಶೆಯ ಭಾವನೆ ಮೂಡುತ್ತದೆ, ಮತ್ತು ನಿಮ್ಮ ಪ್ರಯತ್ನಗಳು ವ್ಯರ್ಥವಾಗುವ ಸಾಧ್ಯತೆ ಇದೆ.

ಧನು:ನಿಮ್ಮ ಸುತ್ತಲೂ ಇರುವ ಪರೋಪಕಾರಿಗಳು ಅಪೇಕ್ಷಿಸದ, ಆದರೆ ಮೌಲ್ಯಯುತ ಸಲಹೆ ನೀಡಬಹುದು. ಅದನ್ನು ಸೂಚನೆಯನ್ನಾಗಿ ತೆಗೆದುಕೊಳ್ಳಿ, ಮತ್ತು ಅದನ್ನು ನಿಮ್ಮ ಸುಧಾರಣೆಗೆ ಬಳಸಿಕೊಳ್ಳಿ. ಸಲಹೆ ಅನುಸರಿಸಿದ ನಂತರ ನಿಮ್ಮ ತೀರ್ಮಾನ ಕೈಗೊಳ್ಳಿರಿ, ಮತ್ತು ಇದು ಅನುಮಾನವಿಲ್ಲದೆ ಅನುಕೂಲಗಳನ್ನು ತಂದುಕೊಡುತ್ತದೆ.

ಮಕರ: ಉನ್ನತ ಶಿಕ್ಷಣಕ್ಕಾಗಿ ನೀವು ವಿದೇಶಗಳಿಗೆ ಹಾರಾಟ ಯೋಜಿಸುತ್ತಿದ್ದರೆ, ಇಂದು ದಾಖಲೆಗಳು ಮತ್ತಿತರೆ ಸಿದ್ಧತೆಗಳನ್ನು ಪ್ರಾರಂಭಿಸಿ. ನೀವು ವಿದ್ಯಾರ್ಥಿಯಾಗಿರಲಿ ಅಥವಾ ಇಲ್ಲದೇ ಇರಲಿ, ಈ ಅನುಕೂಲಕರ ದಿನದಲ್ಲಿ, ನೀವು ಮಾಡಬೇಕಾದುದು ಆದ್ಯತೆಯ ಪಟ್ಟಿಯನ್ನು ಸಿದ್ಧಪಡಿಸುವುದು, ಅದನ್ನು ಅನುಸರಿಸುವುದು ಮತ್ತು ಒಂದಾದ ನಂತರ ಒಂದರಂತೆ ನಿಮ್ಮ ಕೆಲಸಗಳನ್ನು ಪೂರೈಸುವುದು. ನೀವು ಷೇರು ಮಾರುಕಟ್ಟೆಯಲ್ಲಿ ತೊಡಗಿದ್ದರೆ, ಅನುಕೂಲಕರ ದಿನ ಮುಂದಿರುವುದನ್ನು ನಿರೀಕ್ಷಿಸಿ.

ಕುಂಭ: ನಿಮ್ಮ ದಾರಿಯಲ್ಲಿ ಅಡ್ಡಿಯನ್ನು ಎದುರಿಸುತ್ತಿದ್ದೀರಾ? ನಿಮ್ಮ ಮಾರ್ಗದಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಿ, ಹಾಗೂ ಮತ್ತೊಮ್ಮೆ ಸರಾಗ ಮತ್ತು ಸ್ಪಷ್ಟ ರಸ್ತೆ ನಿಮಗೆ ಕಾಣುತ್ತದೆ. ಹಿಂದೆ ನೀವು ಮಾಡಿದ ಪ್ರಯತ್ನಗಳು ಇಂದು ಫಲ ನೀಡಲು ಸಜ್ಜಾಗಿವೆ. ನಿಮ್ಮ ಪ್ರಸ್ತುತದ ಸಾಧನೆಗಳ ಕುರಿತು ಸಂತೃಪ್ತರಾಗಬೇಡಿ, ನೀವು ಕಠಿಣ ಪರಿಶ್ರಮಪಡುವಲ್ಲಿ ನೀವು ಇನ್ನೂ ದೂರ ಸಾಗಬೇಕಾಗಿದೆ.

ಮೀನ: ಇಂದು ನೀವು ಯಾವುದೇ ದೊಡ್ಡ ಹೂಡಿಕೆಗಳಿಗೆ ಬದ್ದರಾಗಬೇಡಿ. ಊಹಾತ್ಮಕ ಚಟುವಟಿಕೆಗಳನ್ನು ತಪ್ಪಿಸುವುದು ಉತ್ತಮ. ಉದ್ಯೋಗದಲ್ಲಿರುವವರಿಗೆ ನಿಮ್ಮ ಸಹೋದ್ಯೋಗಿಗಳ ಸಹಕಾರದಿಂದ ನೀವು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.

ABOUT THE AUTHOR

...view details