ಕರ್ನಾಟಕ

karnataka

By

Published : Dec 12, 2021, 5:10 AM IST

ETV Bharat / bharat

ಲಾರಿಯ ಇಂಜಿನ್​ ಬಳಿ ಬಚ್ಚಿಟ್ಟು 8 ಕೆಜಿ ಚಿನ್ನ ಕಳ್ಳಸಾಗಾಟ: ಇಬ್ಬರ ಬಂಧನ

ಲಾರಿಯ ಇಂಜಿನ್​ ಬಳಿ ಬಚ್ಚಿಟ್ಟು ಸಾಗಿಸುತ್ತಿದ್ದ 8 ಕೆಜಿ ತೂಕದ ಬಂಗಾರವನ್ನು ವಶಕ್ಕೆ ಪಡೆದ ಪೊಲೀಸರು ಇಬ್ಬರು ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ.

gold bars smuggling
ಚಿನ್ನ ಕಳ್ಳಸಾಗಾಟ

ಆಂಗ್ಲಾಂಗ್ (ಅಸ್ಸೋಂ): ಅಸ್ಸೋಂ ಬೊಕಾಜಾನ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 8 ಕೆಜಿ ಚಿನ್ನವನ್ನು ವಶಕ್ಕೆ ಪಡೆದ ಪೊಲೀಸರು ಇಬ್ಬರು ಖದೀಮರನ್ನು ಬಂಧಿಸಿದ್ದಾರೆ. ಮಣಿಪುರದಿಂದ ಗುವಾಹಟಿಗೆ ತೆರಳುತ್ತಿದ್ದ ಲಾರಿಯಲ್ಲಿ ಚಿನ್ನ ಪತ್ತೆಯಾಗಿದೆ.

ಅಸ್ಸೋಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಬೊಕಾಜಾನ್‌ನಲ್ಲಿ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮಣಿಪುರದ ಇಬ್ಬರು ಕಳ್ಳಸಾಗಣೆದಾರರು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು 8 ಕೆಜಿ ತೂಕದ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು.

ಮಣಿಪುರದಿಂದ ಗುವಾಹಟಿಗೆ ತೆರಳುತ್ತಿದ್ದ ಲಾರಿಯನ್ನು ತಡೆದ ಪೊಲೀಸರು ತಪಾಸಣೆ ನಡೆಸಿದಾಗ ವಾಹನದ ಇಂಜಿನ್ ಬಳಿ ಚಿನ್ನವನ್ನು ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.

ಮಣಿಪುರ ಮೂಲದ ಪ್ರಕಾಶ್ ಸುಭಾಷ್ ಮತ್ತು ಪ್ರಕಾಶ್ ಬಸ್ನೆಟ್ ಎಂಬ ಇಬ್ಬರು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ಚಿನ್ನದ ಮಾರುಕಟ್ಟೆ ಮೌಲ್ಯ ಸುಮಾರು ₹ 4 ಕೋಟಿ ಎಂದು ತಿಳಿದುಬಂದಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ, ಕಳ್ಳಸಾಗಾಣಿಕೆ ತಡೆದ ಅಸ್ಸೋಂ ಪೊಲೀಸರ ಕಾರ್ಯವೈಖರಿಗೆೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿ ಟ್ವಿಟರ್​ ಖಾತೆ ಹ್ಯಾಕ್​.. ಬಿಟ್​ಕಾಯಿನ್ ಮಾನ್ಯತೆ​ ಕುರಿತಾದ ಟ್ವೀಟ್​​​ ವೈರಲ್​

ABOUT THE AUTHOR

...view details